ತಹಶೀಲ್ದಾರ್ ಅಂಬುಜಾ ಜೊತೆ ಮಾತುಕತೆ ನಡೆಸಿದ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷರು,




 ವರದಿ:- ವೀರಮಣಿ 



ಮಲೆನಾಡಿಗರ ಮುಖ್ಯ ಸಮಸ್ಯೆಯಾದ 94c ಹಾಗೂ ಈ ಸ್ವತ್ತಿನ ಕುರಿತಾಗಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಶೃಂಗೇರಿ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಅಂಬುಜಾ ಅವರೊಂದಿಗೆ ಮಲೆನಾಡು ಭಾಗದ ಸಮಸ್ಯೆಗಳ ಕುರಿತಾಗಿ ಸವಿಸ್ತಾರವಾಗಿ ಸುಧಾಕರ್ ಶೆಟ್ಟಿ ಅವರು ಚರ್ಚಿಸಿದ್ದಾರೆ.

ಅತಿಶೀಘ್ರವಾಗಿ ಮಲೆನಾಡಿಗರ ಸಮಸ್ಯೆಗೆ ಪರಿಹಾರ ನೀಡಲೇಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿಸಿದ್ದಾರೆ.




ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಮಲೆನಾಡು ಭಾಗವು ಎಲ್ಲರ ಕಣ್ಣಿಗೂ ಸ್ವಚ್ಛಂದವಾಗಿ ಬಹಳ ಸುಂದರವಾಗಿ ತೋರುತ್ತದೆ, ಆದರೆ ಇಲ್ಲಿನ ಮೂಲನಿವಾಸಿಗಳು ಎದುರಿಸುತ್ತಿರುವ ಸಂಕಷ್ಟ ಯಾರಿಂದಲೂ ಪರಿಹಾರ ವಾಗುತ್ತಿಲ್ಲ. ತಲೆದೋರಿರುವ 94c ಹಾಗೂ ಈ ಸ್ವತ್ತುಗಳ ಸಮಸ್ಯೆ ಅತಿ ಶೀಘ್ರವಾಗಿ ಪರಿಹಾರ ವಾಗಬೇಕೆಂದು ಮಾನ್ಯ ತಹಸೀಲ್ದಾರ್ ಅವರಲ್ಲಿ ಕೋರಿದ್ದಾರೆ.


ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಶೃಂಗೇರಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಳಸಪ್ಪ ಗೌಡ, ಕಾರ್ಯದರ್ಶಿ ದಿನೇಶ್ ಹೆಗ್ಡೆ, ದೇವೇಂದ್ರ, ಉಪಸ್ಥಿತರಿದ್ದರು,

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!