ತಹಶೀಲ್ದಾರ್ ಅಂಬುಜಾ ಜೊತೆ ಮಾತುಕತೆ ನಡೆಸಿದ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷರು,
ವರದಿ:- ವೀರಮಣಿ
ಮಲೆನಾಡಿಗರ ಮುಖ್ಯ ಸಮಸ್ಯೆಯಾದ 94c ಹಾಗೂ ಈ ಸ್ವತ್ತಿನ ಕುರಿತಾಗಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಶೃಂಗೇರಿ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಅಂಬುಜಾ ಅವರೊಂದಿಗೆ ಮಲೆನಾಡು ಭಾಗದ ಸಮಸ್ಯೆಗಳ ಕುರಿತಾಗಿ ಸವಿಸ್ತಾರವಾಗಿ ಸುಧಾಕರ್ ಶೆಟ್ಟಿ ಅವರು ಚರ್ಚಿಸಿದ್ದಾರೆ.
ಅತಿಶೀಘ್ರವಾಗಿ ಮಲೆನಾಡಿಗರ ಸಮಸ್ಯೆಗೆ ಪರಿಹಾರ ನೀಡಲೇಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿಸಿದ್ದಾರೆ.
ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಮಲೆನಾಡು ಭಾಗವು ಎಲ್ಲರ ಕಣ್ಣಿಗೂ ಸ್ವಚ್ಛಂದವಾಗಿ ಬಹಳ ಸುಂದರವಾಗಿ ತೋರುತ್ತದೆ, ಆದರೆ ಇಲ್ಲಿನ ಮೂಲನಿವಾಸಿಗಳು ಎದುರಿಸುತ್ತಿರುವ ಸಂಕಷ್ಟ ಯಾರಿಂದಲೂ ಪರಿಹಾರ ವಾಗುತ್ತಿಲ್ಲ. ತಲೆದೋರಿರುವ 94c ಹಾಗೂ ಈ ಸ್ವತ್ತುಗಳ ಸಮಸ್ಯೆ ಅತಿ ಶೀಘ್ರವಾಗಿ ಪರಿಹಾರ ವಾಗಬೇಕೆಂದು ಮಾನ್ಯ ತಹಸೀಲ್ದಾರ್ ಅವರಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಶೃಂಗೇರಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಳಸಪ್ಪ ಗೌಡ, ಕಾರ್ಯದರ್ಶಿ ದಿನೇಶ್ ಹೆಗ್ಡೆ, ದೇವೇಂದ್ರ, ಉಪಸ್ಥಿತರಿದ್ದರು,
Comments
Post a Comment