Posts

Showing posts from September, 2023

K C F,ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ವತಿಯಿಂದ ಮಿಲಾದ್ ಕಾನ್ಫರೆನ್ಸ್2023

Image
  ಕರ್ನಾಟಕ ಕಲ್ಬರಲ್ ಫೌಂಡೇಶನ್  ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ  ﷺ  ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಸರೆನ್ಸ್ -2023 ಕಾರ್ಯಕ್ರಮ ಅಬ್ಬಾಸಿಯದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 22/09/2023 ರಂದು ಬಹಳ ವಿಜೃಂಭಣೆ ಯಿಂದ ನಡೆಯಿತು. KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಹಬೀಬ್ ಅಲ್ ಬುಖಾರಿ ತಂಗಳ್ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಮೀದ್ ಸಹದಿ ಝುಹ್ರಿ,ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. ಕಾರ್ಯಕ್ರಮ ದಲ್ಲಿ ಕೆಸಿಎಫ್ ಸಂಘಟನ ಅಧ್ಯಕ್ಷ ಉಮರ್ ಝುಹ್ರಿ  ಅವರನ್ನು  ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ  TVS ಗ್ರೂಫ್ ಮಾಲೀಕ ಡಾ|ಹೈದರ್ ಹಾಜಿ ಹಾಗೂ ಇಂಜಿನಿಯರ್ ಹಮೀದ್ ಕುಳಿಯಾರ್ ರವರನ್ನು ನಮ್ಮ ಸಂಘಟನೆಯ ಹಿತೈಷಿಗಳು ಸಹಾಯಕರು ಎಂಬುದನ್ನು ಗುರುತಿಸಿ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. .. KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್, ಯಾಕೂಬ್ ಕಾರ್ಕಳ ಬಂದ ಅತಿಥಿ ಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ.ಸಂಘಟನೆ ಬಂದ ದಾರಿಯನ್ನು ಸ್ಮ...

ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023

Image
  22/09/2023, ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023 ರಬೀಹುಲ್ ಅವ್ವಲ್ ತಿಂಗಳು ಬರುವಾಗಲೇ ವಿಶ್ವಾಶಿಗಳಿಗೆ ಎಲ್ಲಿಲ್ಲದ ಸಂತೋಷ.ವಿಶಿಷ್ಟವಾಗಿ ಕೆಸಿಎಫ್ ಕುವೈಟ್ ಕಾರ್ಯಕರ್ತರಿಗೆ ಹಬ್ಬದ ಸಂಭ್ರಮ. ಅತ್ಯಂತ ಮಹತ್ತರವಾದ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಕೆ ಸಿ ಎಫ್ ನಡೆಸಿಕೊಂಡು ಬರುವಂತಹ ವಿಲಾದ್ ಸಮ್ಮೇಳನವು ಜಗತ್ತು ಕಂಡ ಮಹಾನಾಯಕ ವಿಶ್ವ ಪ್ರವಾದಿ صلي الله عليه وسلم ಜನ್ಮದಿನದ ಅಂಗವಾಗಿ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಇದೇ ಬರುವ ತಾರೀಕು 22 ಸಪ್ಟೆಂಬರ್ ಶುಕ್ರವಾರ 5:00 ಗಂಟೆಗೆ ಸರಿಯಾಗಿ ಕುವೈಟ್ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿರುವುದು ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಊರಿನಲ್ಲಿ ಖ್ಯಾತಿ ಪಡೆದಂತಹ ಮದನೀಯಂ ಎಂಬ ಖ್ಯಾತ ನಾಮದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಾಗೂ ನಮ್ಮ ಊರಿನ ನಮ್ಮ ಪ್ರೀತಿಯ ನೆಚ್ಚಿನ ನಾಯಕ ಕರ್ನಾಟಕ ರಾಜ್ಯದ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿರುವರು. ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಯಶಸ್ವಿಗೊಳಿಸಬೇಕು ಇನ್ಷಾ ಅಲ್ಲಾ ಸಯದ್ ಕುಟುಂಬದ ಧ್ರುವತಾರೆ ಸೈಯದ್ ಹಬೀಬ್ ಕೋಯ ತಂಞಳ್ ಕುವೈಟ್ ದುವಾ ಆಶಿರ್ವಚನ ನೀಡಲಿರುವರು.      ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ

ಕುವೈತ್:-ಕೆ ಸಿ ಎಫ್,ವತಿಯಿಂದ SSF,ಗೋಲ್ಡನ್ ಫಿಫ್ಟಿ ಪ್ರಚಾರ ಕಾರ್ಯಕ್ರಮ,

Image
ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರ ಕಾರ್ಯಕ್ರಮ ಪ್ರಯುಕ್ತ KCF ಕುವೈಟ್ ಸಮಿತಿಯು  ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಎರ್ಮಾಡ್ ಮುಸ್ಲಿಯಾರ್  ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡು ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ  ಅವರು ದುಆ ನೆರವೇರಿಸಿ, ಸ್ವಾಗತ ಭಾಷಣವನ್ನು  ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು, ಉದ್ಘಾಟನೆಯನ್ನು ಬಹು ಉಮರ್ ಝುಹ್ರಿ  ಉದ್ಘಾಟಿಸಿದರು ಅಧ್ಯಕ್ಷರು ಸಂಘಟನ ವಿಭಾಗ, ಆಸoಷಾ ಭಾಷಣ ಮಾಡಿ SSF ವಿವರಿಸಿದರು,ಶಿಕ್ಷಣ ವಿಭಾಗ ಅಧ್ಯಕ್ಷರು ಬಹು ಬಾದಾಷ ಸಖಾಫಿ ಮಾತನಾಡಿ SSF ನಡೆದ ಬಂದ  ದಾರಿಯನ್ನು ವಿವರಿಸಿದರು, SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ  ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ ಇಸ್ಲಾಮಿನ  ಸುಂದರವಾದ ಆಶಯ ಗಳನ್ನು ವಿವರಿಸಿ ನಮ್ಮ ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯ ಉತ್ತಮ ಜೀವನ ನಡೆಸುವ ಅರಿವು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ವಾಗಿದೆ ಮಕ್ಕಳು SSF ಸಂಘಟನೆಯ ಸದಸತ್ವ ಹೊಂದಿದ್ದರೆ ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗ್ರಿತಿಗೊಳಿಸುವಂತಹ SSF ನ  ಮಕ್ಕಳು ಸಜ್ಜಾಗಿದ್ದಾರೆ, ಸ್ವಾತಂತ್ರ...