ಕೊಪ್ಪ -ಕಾರಿನ ಟೈಯರ್ ಬ್ಲಾಸ್ಟ್ ಹರಿಹರಪುರ ಮಾರ್ಗದಲ್ಲಿ ಅಪಘಾತ : ಇಬ್ಬರ ದುರ್ಮರಣ,
ವರದಿ:-ವೀರಮಣಿ
ಕೊಪ್ಪ : ಸಿಗಾದಳು ಹಾಗೂ ಹರಿಹರಪುರ ಮಾರ್ಗಮಧ್ಯದಲ್ಲಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಉಂಟಾಗಿದ್ದು ಸ್ಥಳದಲ್ಲಿಯೇ ಇಬ್ಬರು ಸಾವಾನ್ನಪ್ಪಿದ್ದಾರೆ,
ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತೀರುವಾಗ ಅಪಘಾತ ನಡೆದಿದೆ . ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಕೊಪ್ಪದ ಗುಣವಂತೆ ಮೆಡಿಕಲ್'ನ ಮಾಲೀಕರಾದ ರಾಜಶೇಖರ್ ಹಾಗೂ ಆಲ್ಲೂರಿನ ಮಣಿಕಂಠ ಎಂಬುವವರು ಮೃತರಾಗಿದ್ದರೆ. ಕಾರಿನಲ್ಲಿ ಇನ್ನೂಳಿದ ಇಬ್ಬರಿಗೆ ಗಾಯವಾಗಿದೆ . ಕಾರು ಸಂಪೂರ್ಣ ಜಖಂಗೊಂಡಿದ್ದು , ಹರಿಹರಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ . ಪೊಲೀಸರಯ ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ .
Comments
Post a Comment