ಬುದ್ಧಿವಾದ ಹೇಳಿದ ತಂದೆ ತಾಯಿಯ ಕೊಲೆಗೆ ಮಗನಿಂದ ಯತ್ನ,!
ಉಡುಪಿ:- ಯುವಕನೋರ್ವ ತಂದೆತಾಯಿಯನ್ನೇ ಕೊಲೆಗೆ ಯತ್ನಿಸಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ . ಹಂದಾಡಿ ಗ್ರಾಮದ ಜಯರಾಮ ಶೆಟ್ಟಿ ಹಾಗೂ ಹೆಂಡತಿ ಪೂರ್ಣಿಮಾ ಶೆಟ್ಟಿಯನ್ನುಇವರ ಪುತ್ರ ರಜತ್ ಶೆಟ್ಟಿ ಕೊಲೆಗೆ ಯತ್ನಿಸಿದ್ದಾನೆ .
ಅಪ್ಪ- ಅಮ್ಮ ಇಬ್ಬರೂ ಶಿಕ್ಷಕರಾಗಿದ್ದರು . ರಜತ್ ಕೆಲಸ ಮಾಡದೇ ಮನೆಯಲ್ಲಿ ಇದ್ದನು . ತಂದೆತಾಯಿ ಅ ಆತನಿಗೆ ಬುದ್ದಿ ಹೇಳಿ ಕೆಲಸಕ್ಕೆ ಹೋಗುವಂತೆ ಹೇಳಿದ್ದರು .
ಇದರಿಂದ ಕೋಪಗೊಂಡಿದ್ದ ರಜತ್ ತಂದೆ- ತಾಯಿ ಕೆಲಸ ಮುಗಿಸಿ ಮನೆಗೆ ಬರುವಾಗ ಅವಾಚ್ಯವಾಗಿ ಬೈದು ಏಕಾಏಕಿ ತನ್ನ ತಾಯಿಯ ಸೀರೆ , ಕರಿಮಣಿ ತಾಳಿಯನ್ನು ಎಳೆದು ಹಲ್ಲೆ ನಡೆಸಿದ್ದಾನೆ . ಬಳಿಕ ಕತ್ತಿಯನ್ನು ಹಿಡಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ . ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಕೇಸ್ ದಾಖಲಾಗಿದೆ .


Comments
Post a Comment