ಕೊಪ್ಪ,ಸಣ್ಣಕೇರೆ ಶಾಲೆಯಲ್ಲಿ,ಕ್ಷಯರೋಗ ಕಾಯಿಲೆಯ ಬಗ್ಗೆ ಜನ ಜಾಗೃತಿ,


  ಕೊಪ್ಪ:- ತಾಲ್ಲೂಕಿನ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ' ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ'ದ ಅಂಗವಾಗಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳ ಮೂಲಕ ಮಕ್ಕಳು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.ಕ್ಷಯ ರೋಗ ಚಿಕಿತ್ಸಾ ಆಂದೋಲನದ ಘೋಷಣೆಗಳನ್ನು ಕೂಗಿದರು . ಮನೆಗಳು , ಅಂಗಡಿಗಳಿಗೆ ಭೇಟಿ ನೀಡಿ ಮಾಹಿತಿ ಕರಪತ್ರಗಳನ್ನು ನೀಡಿದರು,




 ಹರಂದೂರು ಸಮುದಾಯ ಆರೋಗ್ಯ ಅಧಿಕಾರಿ ಅನಿತಾ ಲವಿನಾ ಡಿಸೋಜ , ಸಮುದಾಯ ಆರೋಗ್ಯ ಅಧಿಕಾರಿ ನಿವೇದಿತಾ , ಸಹಶಿಕ್ಷಕಿ ಭಾರತಿ , ಆಶಾ ಕಾರ್ಯಕರ್ತೆ ಪುಷ್ಪ ಇದ್ದರು .


ವರದಿ 🖋 ಮಜೀದ್ ಕೊಪ್ಪ 






Comments

Popular posts from this blog

ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,