ಮಾನವೀಯತೆ ಮೆರೆದ ಸಚಿವ ಸುನಿಲ್ ಕುಮಾರ್,ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ,
ಮಾನವೀಯತೆ ಮೆರೆದ ಸಚಿವ ಸುನಿಲ್ ಕುಮಾರ್,ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ,
ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ಮೆಸ್ಕಾಂ ಕಟ್ಟಡ , ಹಾಗೂ ಶೃಂಗೇರಿ ಶಾರದಾಮಾತೆಯ ದರ್ಶನ ಹಾಗೂ ಉಭಯ ಶ್ರೀಗಳ ದರ್ಶನ ಪಡೆದು ಶೃಂಗೇರಿಯಿಂದ ಕಾರ್ಕಳದ ಕಡೆಗೆ ತಮ್ಮ ವಾಹನದಲ್ಲಿ ಕುಟುಂಬದ ಸದಸ್ಯರೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಯಾರೂ ಸಹಾಯಕ್ಕೆ ಮುಂದೆ ಬಾರದ ಈ ಪರಿಸ್ಥಿತಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಅವರು ಮಾನವೀಯತೆ ಮೆರೆದು ಆತನನ್ನು ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಸಹಕರಿಸಿದ್ದಾರೆ,
ಅಪಘಾತಕ್ಕೀಡಾದ ಯುವಕ ಬಾಳೆಹೊನ್ನೂರು ಮೂಲದವನು ಎಂದು ಗುರುತಿಸಲಾಗಿದ್ದು , ಸಚಿವರ ಹಿಂದಿದ್ದ ಬೆಂಗಾವಲು ವಾಹನದಲ್ಲಿ ಆತನನ್ನು ಕಾರ್ಕಳದ ಆಸ್ಪತ್ರೆಗೆ ದಾಖಲು ಮಾಡಿ ಅಗತ್ಯವಾಗಿದ್ದ ಚಿಕಿತ್ಸೆ ದೊರೆಯುವಂತೆ ಮಾಡಿದ ಸಚಿವ ಸುನಿಲ್ ಕುಮಾರ್ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
🖊️ವೀರಮಣಿ,


Comments
Post a Comment