ಶೃಂಗೇರಿ,ಸ್ಕೂಲ್ ಟ್ರಿಪ್ ವಾಹನ ಅಪಘಾತ,ಅದೃಷ್ಟವಶಾತ್‌ ಮಕ್ಕಳು ಅಪಾಯದಿಂದ ಪಾರು,


 


ಶೃಂಗೇರಿ:- ತಾಲೂಕಿನ ಮೆಣಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳಿದ್ದ ಸ್ಕೂಲ್ ಟ್ರಿಪ್ ಓಮಿನಿ ಕಾರಿಗೆ ಇನೋವಾ ಕಾರ್ ಗುದ್ದಿದ ಪರಿಣಾಮ ಓಮಿನಿ ಕಾರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.


ʼʼವೈಟ್ ಬೋರ್ಡ್ ಕಾರಿನಲ್ಲಿ ಸ್ಕೂಲ್ ಟ್ರಿಪ್,, ಅನಾಹುತವಾದಲ್ಲಿ ಜವಾಬ್ದಾರರು ಯಾರು ? 

ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಿ,


ಓಮ್ನಿ ಹಾಗೂ ಇನೋವಾ ನಡುವಿನ ಅಪಘಾತದಲ್ಲಿ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ವೈಟ್ ಬೋರ್ಡ್ ಹೊಂದಿದ ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಶಾಲಾ ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಯಾರಾದರೂ ತೀವ್ರತರವಾದ ಗಾಯಕ್ಕೀಡಾದಲ್ಲಿ ಅಥವಾ ಬೇರಾವುದೇ ಅಪಾಯಗಳಾಗಿದ್ದಲ್ಲಿ ಯಾವುದೇ ವಿಮೆ ಸಿಗುವುದಿಲ್ಲ, ಅಂತಹ ಸಂಧರ್ಭದಲ್ಲಿ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ. ಈ ರೀತಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗಾಗಿ ಬಳಸುತ್ತಿರುವುದರ ಕುರಿತು RTO ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ.




🖋 ಮಜೀದ್ ಕೊಪ್ಪ 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?