NR ಪುರ: ಕೆಕೆಬಿ ಬಸ್ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ,
NR ಪುರ: ಕೆಕೆಬಿ ಬಸ್ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ,
N R,ಪುರ,
ನರಸಿಂಹರಾಜಪುರ ಸಮೀಪದ ಲಕ್ಕಿನಕೊಪ್ಪ ಬಳಿಯ ತೋಟದಕೆರೆ ಕ್ರಾಸ್ ನಲ್ಲಿ ಇಂದು ಸಂಜೆ ಎರಡು ಬಸ್ಸುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಶಿವಮೊಗ್ಗದಿಂದ ಕೊಪ್ಪ ಕಡೆಗೆ ಸಾಗುತ್ತಿದ್ದ ಕೆಕೆಬಿ ಅನ್ನಪೂರ್ಣ ಬಸ್ ಹಾಗೂ ಶೃಂಗೇರಿಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಕೆಎಸ್ಸಾರ್ಟಿಸಿ ಬಸ್ ನಲ್ಲಿ ಸುಮಾರು 42 ಪ್ರಯಾಣಿಕರಿದ್ದು ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಕೆಕೆಬಿ ಬಸ್ ನಲ್ಲಿ 30 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಚಾಲಕ ಹಾಗೂ ಬಸ್ಸಿನಲ್ಲಿ ಅಧಿಕ ಸಖ್ಯೆಯಲ್ಲಿದ್ದ ಶಾಲಾ - ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
🖊️ ವೀರಮಣಿ



Comments
Post a Comment