ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಳಿಕೊಪ್ಪ ನಿವಾಸಿ ಸುರೇಶ್ ಕೆ.ಕೆ ಎಂಬುವವರ ಮನೆಯ ಗಾಡೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರ , ಕಿವಿ ಓಲೆ , 03 ಉಂಗುರಗಳು , 1 ಗ್ರಾಂ ನ ಗುಂಡು , ಕಿವಿಯ ಬುಗುಡಿ , ಹಾಗೂ 35000 ರೂಪಾಯಿ ನಗದನ್ನು ಕಳ್ಳತನ ನಡೆಸಿ ಎಸ್ಕೆಪ್ ಆಗಿದ್ದಾರೆ ಎಂಬುದಾಗಿ ಮನೆಯವರು ದೂರು ನೀಡಿದ್ದಾರೆ .



ಯಾವುದೇ ಸುಳಿವು ಅಥವಾ ಕಳ್ಳತನ ಆದ ಕುರಿತಾದ ಯಾವುದೇ ಮಾಹಿತಿಗಳು ಲಭ್ಯವಾಗದಂತೆ ಕಳ್ಳರು ಕೈಚಳಕ ತೋರಿದ್ದಾರೆ . ಆಗಸ್ಟ್ 16 ರಂದು ಮನೆಯ ಬೆಡ್ ರೂಮ್ ನಲ್ಲಿರುವ ಗಾಡೇಜ್ ಬೀರೂವನ್ನು ಸುರೇಶ್ ಅವರು ನೋಡಿದಾಗ ಹಣ ಹಾಗೂ ಆಭರಣ ಇಲ್ಲದೇ ಇರುವುದು ಗೊತ್ತಾಗಿದೆ . ಈ ಸಂಬಂಧ ಬಾಳೆಹೊನ್ನೂರು ಠಾಣೆಗೆ ದೂರು ನೀಡಿರುವ ಅವರು ಆಗಸ್ಟ್ 10 ರಿಂದ 16 ರ ಬೆಳಗ್ಗೆ 7.30 ರ ಒಳಗೆ ಕಳ್ಳತನ ನಡೆದಿದೆ , ಅಂದಾಜು 175,500 ರೂಪಾಯಿ ಮೌಲ್ಯದ ಒಡವೆಗಳು ಹಾಗೂ 35,000 ರೂಪಾಯಿ ನಗದು ಇವುಗಳನ್ನು ಕಳ್ಳರು ಕದ್ದೊಯ್ದಿದ್ದು ಈ ಕೃತ್ಯವನ್ನು ಎಸಗಿದ ಕಳ್ಳನನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ್ದಾರೆ . ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಠಾಣೆಯ ಪೊಲೀಸರು ಈ ಸಂಬಂಧ ಹೆಚ್ಚಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ,




🖊️ ವೀರಮಣಿ ಬಾಳೆಹೊನ್ನುರು


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?