ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸಾರಥಿಯಾಗಿ ಕೇಶವತ್ತಿ ಕೆ.ಆರ್.ಪ್ರಕಾಶ್ ಆಯ್ಕೆ,
ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸಾರಥಿಯಾಗಿ ಕೇಶವತ್ತಿ ಕೆ.ಆರ್.ಪ್ರಕಾಶ್ ಅವಿರೋಧ ಆಯ್ಕೆ,
ಬಾಳೆಹೊನ್ನೂರು:- ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಚುನಾವಣೆಯು ಸಂಘದ ಆವರಣದಲ್ಲಿ ಸೆ .8 ರಂದು ನಡೆಯಿತು . ಸಂಘದ ನೂತನ ಅಧ್ಯಕ್ಷರಾಗಿ ಕೇಶವತ್ತಿ ಕೆ.ಆರ್.ಪ್ರಕಾಶ್ರವರು ಅವಿರೋಧವಾಗಿ ಆಯ್ಕೆ ಗೊಂಡರು . ಜಿಲ್ಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು . ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ ಕರ್ಕೇಶ್ವರಗ್ರಾಮಪಂಚಾಯಿತಿ ಅಧ್ಯಕ್ಷ ಕೇಶವತ್ತಿ ಕೆ.ಎಸ್.ರಾಜೇಶ್ , ಸಂಘದ ನಿರ್ದೇಶಕರುಗಳಾದ ಕೆ.ಸಿ.ಜಯಪಾಲ , ಹೆಚ್ . ಚಂದ್ರಶೇಖರ್ , ಏ.ಜಿ.ರಾಜೇಂದ್ರ ಜೋಯಿಸ್ , ಎಂ.ನಾರಾಯಣ , ಹೆಚ್.ಟಿ.ಮಂಜಪ್ಪಗೌಡ , ಜೀರುಳ್ಳಿ ಮಂಜುನಾಥ್ , ರೇವತಿ ಕೃಷ್ಣಮೂರ್ತಿ , ಹೊನ್ನಮ್ಮ , ಸಣ್ಣಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು .
🖊️ವೀರಮಣಿ ಬಾಳೆಹೊನ್ನುರು

Comments
Post a Comment