Posts

Showing posts from October, 2022

ಕೊಪ್ಪ:-ಬಿರಿಯಾನಿ ಹಂಚಿದ 'ಪುನೀತ್' ಫ್ಯಾನ್ಸ್

Image
  ಅಪ್ಪು' ಪುಣ್ಯಸ್ಮರಣೆ ದಿನ ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಗ್ರಾಮ ದಲ್ಲಿ ಅನ್ನದಾನ ಬಿರಿಯಾನಿ ಹಂಚಿದ 'ಪುನೀತ್' ಫ್ಯಾನ್ಸ್  ಚಿಕ್ಕಮಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವೇ ಕಳೆದಿದೆ. ಆದರೂ ಕೂಡ ಅಭಿಮಾನಿಗಳಿಗಂತೂ ಇನ್ನೂ ನೆನಪು ಹಾಗೆ ಉಳಿದಿದೆ. ಈಗಾಗಲೇ ಅಭಿಮಾನಿಗಳು ಅಪ್ಪು ನೆನಪಿಗಾಗಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಇಂದು (ಅ.30) ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ರಾಜ್ಯದ ಹಲವೆಡೆ ಅನ್ನದಾನ ಮಾಡುವ ಮೂಲಕ ಈ ದಿನವನ್ನು ಅಭಿಮಾನಿಗಳು ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ಹೂವಿನಹಕ್ಳು ಹಿರೇಗದ್ದೆ ಗ್ರಾಮ ದಲ್ಲಿ ಅನ್ನದಾನ ನಡೆದಿದ್ದು, ಪುನೀತ್ ಅಭಿಮಾನಿಗಳು ಜನರಿಗೆ ಬಿರಿಯಾನಿ ಹಂಚಿದ್ದಾರೆ . ಅಪ್ಪು ಪುಣ್ಯ ಸ್ಮರಣೆ ಮಾಡಿದ್ದಾರೆ. ಇನ್ನೂ, ಇಂದು ಅವರ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಶೃಂಗೇರಿ ಶಾಸಕರಾದ TD ರಾಜೇಗೌಡ್ರು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ  D M ಸುದೇವ್, ಸದಸ್ಯರು ಸುಮಾ, ಜ್ಯೋತಿ, ಸುಪ್ರಿತಾ.. ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂದಿದ್ದರೂ... ರೋಟರಿ ರಕ್ತ ಕೇಂದ್ರ ಪ್ರಾದೇಶಿಕ ರಕ್ತ ಸಂಗ್ರಹಣ ಕೇಂದ್ರ ಶಿವಮೊಗ್ಗ ಇವರ ವತಿಯಿಂದ ರಕ್ತ ದಾನ ಶಿಬಿರ ಕೂಡ ಆಯೋಜಿಸಲಾಗಿದೆ. 🖋ವೀರಮಣಿ ಬಾಳೆಹೊನ್ನುರು,

ಒಂದು ಗಂಟೆಗೂ ಹೆಚ್ಚು ಕಾಲ ದೇಶದಾದ್ಯಂತ ವಾಟ್ಸ್ ಆ್ಯಪ್ ಬಂದ್.!?ಕಾರಣ

Image
  ಒಂದು ಗಂಟೆಗೂ ಹೆಚ್ಚು ಕಾಲ ದೇಶದಾದ್ಯಂತ ವಾಟ್ಸ್ ಆ್ಯಪ್ ಬಂದ್.!? ಇಂದು ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆ, ವಾಟ್ಸ್ಆಪ್ ಕೆಲಸ ಮಾಡುತ್ತಿರಲಿಲ್ಲ, ವಾಟ್ಸ್ಆಪ್ ಗ್ರೂಪ್ ಹಾಗೂ ಚಾಟ್ ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಸುಮಾರು ಒಂದು ಗಂಟೆಗೂ ಅಧಿಕ ಕಾಲದಿಂದ ವಾಟ್ಸ್ಆಪ್ ಕೆಲಸ ಮಾಡದೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತು.ಈ ಬಗ್ಗೆ ನೋಟಿಫಿಕೇಶನ್ ಕೂಡ ಬರುತ್ತಿರಲಿಲ್ಲ.ಮೇಲಾಗಿ ಒಬ್ಬರಿಂದ ಇನ್ನೊಬ್ಬರಿಗೆ ಮೆಸೇಜ್ ಕಳಿಸಲಾಗುತ್ತಿರಲಿಲ್ಲ.ಸೌದಿಅರೇಬಿಯ ಸಹಿತ ಭಾರತದೆಲ್ಲೆಡೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದು ಮೆಸೇಜ್ ಕಳಿಸಲಾಗಲಿಲ್ಲ,ಬೇರೆಯವರಿಂದ ಮೆಸೇಜ್ ಬರುತ್ತಲು ಇರಲಿಲ್ಲ.ಈ ಬಗ್ಗೆ ವರದಿ ಮಾಡಿದ ಡೌನ್ ಡಿಟೇಕ್ಟರ್ ವೆಬ್ ಸೈಟ್ ವಾಟ್ಸ್ಆಪ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನ ವರದಿ ಮಾಡಿದೆ, ವಾಟ್ಸ್ಆಪ್ ವೆಬ್ ಕನೆಕ್ಟ್ ಮಾಡಲು ಹೋದಲ್ಲಿ ನಿಮ್ಮ ಮೊಬೈಲ್ ಆಕ್ಟೀವ್ ಇಂಟರ್ನೆಟ್ ಇದೆಯಾ ಪರಿಶೀಲಿಸಿ ಎಂಬ ಮಾಹಿತಿ ಬರುತ್ತಿತ್ತು.ಕೆಲವು ಗಂಟೆಗಳ ನಂತರಇದೀಗ ವಾಟ್ಸ್ಯಾಪ್ ವರ್ಕ್ ಆಗುತ್ತಿದೆ. ಆದರೆ ವಾಟ್ಸ್ಆಪ್ ನಿಷ್ಕ್ರಿಯವಾಗಲು ನಿಕರ ಕಾರಣ ಇನ್ನಷ್ಟೆ ಗೊತ್ತಾಗಬೇಕಾಗಿದೆ. ಗಲ್ಫ್ ಸುದ್ದಿ, ರಿಯಾಝ್,ರಿಯಾದ್

ಕಳ್ಳತನಕ್ಕೆ ಬಂದು ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ,!

Image
  ಬೆಂಗಳೂರು:- ಇಂದಿರಾ ನಗರದಲ್ಲಿ ಮನೆಗೆ ಕಳ್ಳತನ ಮಾಡಲು ಬಂದ ಕಳ್ಳ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ, ಮೃತ ವ್ಯಕ್ತಿಯು ಅಸ್ಸಾಂ ಮೂಲದ ದಿಲೀಪ್ ಕುಮಾರ್ ( 46 ) ಎಂದು ತಿಳಿದುಬಂದಿದೆ . ಮನೆಯ ಮಾಲೀಕರು ಕುಟುಂಬ ಸಮೇತರಾಗಿ ಪ್ರವಾಸ ಹೋಗಿದ್ದರು . ಮರಳಿ ಬಂದಾಗ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು . ದೇವರ ಮನೆಯ ಕಿಟಕಿ ತೆಗೆದು ನೋಡಿದಾಗ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ, ತಕ್ಷಣ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಮೃತ ದಿಲೀಪ್ ಕುಮಾರ್ ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ . ಇದೀಗ ಘಟನೆ ಸಂಬಂಧ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

ಎನ್ ಆರ್ ಪುರ,ಕರ್ಕೇಶ್ವರ ಕೈಮರದಲ್ಲಿ ದಸರಾ ಕ್ರೀಡಾಕೂಟ,

Image
  ಎನ್ ಆರ್ ಪುರ,ಕರ್ಕೇಶ್ವರ ಕೈಮರದಲ್ಲಿ ದಸರಾ  ಕ್ರೀಡಾಕೂಟ, ಎನ್,ಆರ್, ಪುರ ತಾಲ್ಲೂಕು ಕರ್ಕೇಶ್ವರ ಕೈಮರ ದ ಫ್ರೆಂಡ್ಸ್ ಸರ್ಕಲ್ ತಂಡದ ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಹಲವು ಬಗೆಯ ಕ್ರೀಡೆಯನ್ನು ಆಯೋಜಿಸಲಾಗಿತ್ತು, ಈ ಕ್ರೀಡೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲರೂ ಭಾಗವಹಿಸಿದ್ದರು..ಊರಿನ ಗ್ರಾಮಸ್ಥರು ಹಾಗೂ ಯುವಕ ಸಂಘದವರು ಅತೀ ಹೆಚ್ಚಿನಲ್ಲಿ ಭಾಗವಹಿಸಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆಕೂಡ ಮಾಡಿರುತ್ತಾರೆ. 🖊️ ವೀರಮಣಿ,ಬಾಳೆಹೊನ್ನುರು