ಚಿಕ್ಕಮಗಳೂರು:- ಜಿಲ್ಲೆಯ ಮೂಡಗೆರೆ ತಾಲೂಕಿನ ನೀಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲಕ್ಷ್ಮಿ ಸಂತೋಷ್ ರವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿದ್ದು, ನಿಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್ ಭಗತ್ ಸಿಂಗ್ ನಗರ ದಲ್ಲಿ ಆದ ಘಟನೆ ಇದು ಸರಿಸುಮಾರು ನಿನ್ನೆ ರಾತ್ರಿ ಹತ್ತು ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ ಪಕ್ಕದಲ್ಲಿರುವ ನಿಡುವಳೆ ಕಲ್ಮನೆ ಸ್ಟೇಟ್ ಪಕ್ಕದಲ್ಲಿರುವ ಮನೆ ಇದಾಗಿದ್ದು ಎಸ್ಟೇಟ್ ನ ಒಳಭಾಗದಲ್ಲಿರುವ ಬೃಹತ್ ಗಾತ್ರದ ಮರ ಮನೆ ಮೇಲೆ ಬಿದ್ದು ಈ ಸಮಸ್ಯೆಯಾಗಿದೆ ಹಲವು ಬಾರಿ ಕಲ್ಮನೆ ಎಸ್ಟೇಟ್ ನ ವರಿಗೆ ತಿಳಿಸಿದರು ಸಹ ನಿರ್ಲಕ್ಷತನ ವಹಿಸಿದ್ದಾರೆ ಎಂದು ಮನೆಯ ಮಾಲೀಕ ಸಂತೋಷ್ ತಿಳಿಸಿದರು,
ಕೊಪ್ಪ :ಪಟ್ಟಣದ ಹೊರವಲಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣಕೆರೆಯ ಮಕ್ಕಳು ಇಂಗ್ಲಿಷ್ ಫೆಸ್ಟ್ ನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಪಿಎಂಶ್ರೀ ಕೆಪಿಎಸ್ ಶಾಲೆ ಕೊಪ್ಪ ಪಟ್ಟಣದಲ್ಲಿ ನಡೆದ ಮೂರು ಕ್ಲಸ್ಟರ್ ಗಳ ನಡುವಿನ ಇಂಗ್ಲಿಷ್ ಫೆಸ್ಟ್ ನ 1 ರಿಂದ 5 ನೇ ತರಗತಿಯ ಸ್ಪರ್ಧೆಗಳಲ್ಲಿ ಸಣ್ಣಕೆರೆ ಶಾಲೆಯ ವಿದ್ಯಾರ್ಥಿಗಳಾದ ಶೌರ್ಯ ಯು ರೀಡಿಂಗ್ ಪ್ರಥಮ, ಸೈಯದ್ ಆರಿಜ್ ಅರ್ಹಂ ರೈಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, ತನಯ್ ಗೌಡ ಸ್ಟೋರಿ ಟೆಲ್ಲಿಂಗ್ ತೃತೀಯ, ಅಕ್ಷರ ಎಸ್ ಶೆಟ್ಟಿ ಪಿಕ್ ಅಂಡ್ ಸ್ಪೀಚ್ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಭಾಷೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವುದಕ್ಕೆ ಶಾಲಾ ಎಸ್.ಡಿ.ಎಂ.ಸಿ ಮತ್ತು ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಎಸ್. ಡಿ. ಎಂ. ಸಿ ಮತ್ತು ದಾನಿಗಳ ಸಹಕಾರದಿಂದ ಪೂರ್ವ ಪ್ರಾಥಮಿಕ ಎಲ್. ಕೆ. ಜಿ, ಯು.ಕೆ. ಜಿ ತರಗತಿಗಳನ್ನು ಶಾಲೆಯಲ್ಲಿ ಆರಂಭಿಸುತ್ತಿದ್ದು, ಈ ಇಂಗ್ಲಿಷ್ ಸ್ಪರ್ಧೆಗಳಲ್ಲಿ ಈ ಬಾರಿ ಅತಿ ಹೆಚ್ಚು ಮಕ್ಕಳು ಬಹುಮಾನವನ್ನು ಪಡೆದಿರುವುದು ಹೊಸ ಪೋಷಕರಿಗೆ ಪ್ರೇರಣೆಯಾಗಲಿದೆ ಎಂದು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಬಿ. ವಿಜಯ್ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕಿ ಭಾರತಿ ಎ, ಸಹಶಿಕ್ಷಕಿ ಆಶಾಲತಾ ಬಿ, ಅತಿಥಿ ಶಿಕ್ಷಕರಾದ ಸುಮ ಮಕ್ಕಳಿಗೆ ಅಭಿನಂದನೆ ತಿಳಿಸಿದ್...


Comments
Post a Comment