Posts

Showing posts from December, 2024

ಕೆ ಸಿ ಎಫ್,ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ಇಹ್ಸಾನೋತ್ಸವ-2025,

Image
  ಇಹ್ಸಾನೋತ್ಸವ-2025 ಸ್ವಾಗತ ಸಮಿತಿ ರಚನೆ; ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19ಮತ್ತು 20ರಂದು ನಡೆಯಲಿದೆ, ಮಂಗಳೂರು; ಡಿ25 . ಕನ್ನಡ ನಾಡಿನ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಿಣಿಕ ಹಿಂದುಳಿದ ಪ್ರದೇಶಗಳ ಸಬಲೀಕರಣಕ್ಕೆ ಸುನ್ನೀ ಸಂಘ ಕುಟುಂಬದ ಪ್ರತಿಬಧ್ಧತೆಯಾಗಿದೆ ಇಹ್ಸಾನ್ ಚಳುವಳಿ. ಐದುಸಾವಿರದಷ್ಟು ವಿದ್ಯಾರ್ಥಿಗಳ ಗ್ರ್ಯಾಂಡ್ ಅಸೆಂಬ್ಲೇಜ್ ಹಾಗೂ ಇಂಟರ್ ಕ್ಯಾಂಪಸ್ ಪ್ರತಿಭಾ ಅನಾವರಣ, ಇಹ್ಸಾನೋತ್ಸವ 2025 ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19 ಮತ್ತು 20 ರಂದು ಖುದುವತುಸ್ಸಾದಾತ್ ಕುಂಬೋಲ್ ತಂಙಳ್ ಮುಂದಾಳತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ, ಈ ಎಲ್ಲಾ ಸಂಭ್ರಮದ ಮುಂಚೂಣಿಯಾಗಿ ಸಾಂಘಿಕ ನಾಯಕರ ಸಂಗಮ ಹಾಗೂ ಸ್ವಾಗತ ಸಮಿತಿ ರಚನಾ ಸಭೆ ಮಂಗಳೂರಿನಲ್ಲಿ ನಡೆಯಿತು, ಹಿರಿಯ ಉಲಮಾ ,ಉಮರಾ ನಾಯಕರು, ಕೆಸಿಎಫ್ ನಾಯಕರು ಸಭೆಯಲ್ಲಿ ಭಾಗಿಯಾದರು. 🖋  ರಿಯಾ ನೆಲ್ಯಾಡಿ

ಕೊಪ್ಪ,ಕುವೆಂಪು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಆಟಕ್ಕೆ ಅದ್ದೂರಿಯ ತೆರೆ,

Image
ಕೊಪ್ಪ:- ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚರಡಿಯ ಕುವೆಂಪು ಕ್ರೀಡಾಂಗಣದಲ್ಲಿ ದಿನಾಂಕ 14/12/2024 ರಿಂದ 16/12/2024 ರವರೆಗೆ  ಅದ್ಭುತ ಕ್ರೀಡಾಸ್ಪರ್ಧೆ. S.B.ಕ್ರಿಕೆಟರ್ಸ್ ಕೊಪ್ಪ ಇವರು ನಡೆಸಿಕೊಟ್ಟ S B F ಪ್ರೀಮಿಯರ್ ಲೀಗ್  ಕುವೆಂಪು ಕಪ್ ಶೃಂಗೇರಿ‌ ಕ್ಷೇತ್ರ ಮಟ್ಟದ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್. ಒಂದು ಲಕ್ಷ ರೂ ನಗದು ಪ್ರಥಮ ಬಹುಮಾನ, ಐವತ್ತು ಸಾವಿರ ನಗದು ದ್ವೀತೀಯ ಬಹುಮಾನ, ಇಪ್ಪತ್ತು ಸಾವಿರ ನಗದು ತೃತೀಯ ಬಹುಮಾನ ಹೊಂದಿದ್ದ ಕ್ರೀಡಾಸ್ಪರ್ಧೆ. ಪ್ರಥಮ ಸ್ಥಾನವನ್ನು ರಿಯಲ್ ಫೈಟರ್ಸ್ ಕೊಪ್ಪ ಪಡೆದರೆ, ದ್ವಿತೀಯ ಸ್ಥಾನವನ್ನು ಜೈ ಭೀಮ್ ಕೊಗ್ರೆ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಆರು ಜನರನ್ನು ಸನ್ಮಾನಿಸಿ ಅಭಿನಂದಿಸಿದ್ದು ಇದರ ಇನ್ನೊಂದು ವಿಶೇಷವೆಂದರೆ.ಹತ್ತು ವರ್ಷದ ಬಾಲ‌ಪ್ರತಿಭೆ ಕು.ಸುಫೈನಾ,  SSLC ಪರೀಕ್ಷೆಯಲ್ಲಿ 613 ಅಂಕ ಪಡೆದ ಸ್ಥಳೀಯ ಪ್ರತಿಭೆ ರಾಕೇಶ್.R, ರಾಷ್ಟ್ರ ಮಟ್ಟದ Wight lifter ಶ್ರೀ ಫಾಜಿಲ್ ರೆಹಮಾನ್ ಸಣ್ಣಕೆರೆ,ಸ್ಥಳೀಯ ಅಂಗನವಾಡಿಯ ಆಯಾ ಶ್ರೀಮತಿ ಸರೋಜಕ್ಕ, ಊರಿನ ವಯೋವೃದ್ಧ ನಾಟಿ ವೈಧ್ಯರಾದ ಶ್ರೀ ಗಂಗಯ್ಯ ಪೂಜಾರಿಯವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಗ್ರಾಮೀಣ ಯುವಕರು‌ ಮನಸ್ಸು ಮಾಡಿದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಎಂಬಂತೆ  ಇಂತಹ ಅದ್ಭುತ ಕ್ರೀಡಾ ಸ್ಪರ್ದೆಯನ್ನು ಏರ್ಪಡಿಸಿದ ಶ್ರೀಯುತ ಅನಿಲ್ ಹಾಗೂ ಅವರ ...

ಕುವೈತ್:- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕುವೈತ್,ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ,

Image
  ಕುವೈಟ್:- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕುವೈತ್,ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ, ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕುವೈತ್ ಕಮಿಟಿಯ ಮಾಸಿಕ ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ 06/ 12 / 2024 ಶುಕ್ರವಾರ ರಾತ್ರಿ ಇಶಾ ನಂತರ ಸಾಲ್ಮೀಯಾ ಸುನ್ನೀ ಸೆಂಟರ್ ನಲ್ಲಿ ಸರಿಸುಮಾರು 6:30 ಗಂಟೆಗೆ ನಡೆಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ ಮದೀನ ಕುವೈತ್ ಕಮಿಟಿಯ ಅಧ್ಯಕ್ಷರಾದ ಬಹು: ಶಾಹುಲ್ ಹಮೀದ್ ಸಅದಿ ಝುಹರಿ ರವರ ಅಧ್ಯಕ್ಷತೆಯಲ್ಲಿ ಅಬ್ದುಲ್ ರಹ್ಮಾನ್ ಸಖಾಫಿ,ಬಾದುಷಾ ಸಖಾಫಿ, ಬಶೀರ್ ಸಖಾಫಿ, ಹುಸೈನ್ ಎರ್ಮಾಡ್,ಮಾಯಿನ್ ಸಖಾಫಿ,ಉಮರ್ ಝುಹ್ರಿ, ಅಬ್ದುಲ್ ಖಾದರ್ ಸಖಾಫಿ ಹಿಮಾಮಿ, ಫಾರೂಕ್ ಸಖಾಫಿ, ಶರೀಫ್ ಸಅದಿ, ಉಸ್ತಾದರು ಗಳ ನೇತೃತ್ವದಲ್ಲಿ ಬ್ರಹತ್ ಬದರ್ ಮೌಲಿದ್ ನಿರ್ವಹಿಸಿದರು. ತದನಂತರ ವಾರ್ಷಿಕ ಮಹಾಸಭೆಯು ಕಿರಾಅತ್ ನೂಂದಿಗೆ ಆರಂಭಿಸಿ ಸ್ವಾಗತವನ್ನು ಅಲ್ ಮದೀನ ಕುವೈತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೂಸ ಇಬ್ರಾಹಿಂ ರವರು ಸ್ವಾಗತಿಸಿದರು ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಬಹು: ಹುಸೈನ್ ಎರ್ಮಾಡ್ ರವರು ನಿರ್ವಹಿಸಿ ಮದ್ಹ್ ಹಾಡನ್ನು ಶಾಫಿ ಫರ್ವಾನಿಯ ಹಾಡಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಕಾರ್ಯದರ್ಶಿ ಮೂಸ ಇಬ್ರಾಹಿಂ ರವರು ಮಂಡಿಸಿದರು. ಅಲ್ ಮದೀನಾ ಯತೀಮ್ ಖಾನ ಮಂಜನಾಡಿಯಲ್ಲಿ ಇರುವ ಸ್ಥಾಪನೆಯ ಪ್ರೊಜೆಕ್ಟ್ ವೀಕ್ಷಣೆ ವಿಡಿಯೋ ವೀಕ್ಷಿಸಲಾಯಿತು.  ಶಾಹುಲ್ ಹಮೀ...

ರಿಯಾದ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾಕಿಸ್ತಾನಿಯ ಬಂಧನ,

Image
 ರಿಯಾದ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾಕಿಸ್ತಾನಿಯ ಬಂಧನ, ರಿಯಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಮನೆಗೆಲಸದವರನ್ನು ದುರ್ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮುಜಬ್ ಅವರು ಬಂಧನದ ಆದೇಶ ಹೊರಡಿಸಿದ್ದಾರೆ. ಇದನ್ನು ಪಬ್ಲಿಕ್ ಪ್ರಾಸಿಕ್ಯೂಷನ್‌ನ ಅಧಿಕೃತ ಮೂಲಗಳು ಖಚಿತಪಡಿಸಿವೆ. ವೀಡಿಯೊ ವೈರಲ್, ವ್ಯಕ್ತಿ ವೇಶ್ಯಾವಾಟಿಕೆ ವೀಡಿಯೊದ ಕ್ಲಿಪ್ ಬಗ್ಗೆ ವರದಿಯನ್ನು ಸಲ್ಲಿಸಿದೆ. ವೀಡಿಯೊದಲ್ಲಿ, ಪಾಕಿಸ್ತಾನಿ ವ್ಯಕ್ತಿ ವೇಶ್ಯಾವಾಟಿಕೆಯಲ್ಲಿ ಹೊಂದಿದ್ದು, ವಿಡಿಯೋ ನೋಡಲು ಇಲ್ಲಿ ಒತ್ತಿ  ಪ್ರಾಯೋಜಕರಿಂದ ಓಡಿಹೋಗುವ ಹಲವಾರು ಮನೆಯಕೆಲಸದವರುನ್ನು ಶೋಷಿಸುತ್ತಿದ್ದಾರೆ ಎಂದು ಸುಲಭವಾಗಿ ಕಾಣಬಹುದು ಎಂದು ಹೇಳಿದೆ, ಆಂಟಿ-ಟ್ರಾಫಿಕಿಂಗ್ ಕಾನೂನಿನ ಪ್ರಕಾರ, ತಪ್ಪಿತಸ್ಥರಿಗೆ 15 ವರ್ಷಗಳ ಜೈಲು ಶಿಕ್ಷೆ ಅಥವಾ SR 1 ಮಿಲಿಯನ್ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಆದಾಗ್ಯೂ, ಕಾನೂನಿನ ಆರ್ಟಿಕಲ್ 4 ಅದಕ್ಕೆ ಅವಕಾಶ ನೀಡುವುದರಿಂದ ಅಪರಾಧಿಗೆ ಇನ್ನೂ ಕಠಿಣವಾದ ದಂಡವನ್ನು ವಿಧಿಸುವುದು ನ್ಯಾಯಾಲಯಕ್ಕೆ ಬಿಟ್ಟದ್ದು ಎಂದು ತಿಳಿದು ಬಂದಿದೆ, ವರದಿ:- ಸೌದಿ ಗೆಜೆಟ್

ಕೊಪ್ಪ, skssf ಆಯೋಜಿಸಲಾಗಿದ್ದ 2024 ರ ಜಿಲ್ಲಾ ಕಲೋತ್ಸವದಲ್ಲಿ ಕೊಪ್ಪ ರೇಂಜ್ ಪ್ರಥಮ,

Image
ಚಿಕ್ಕಮಗಳೂರು:- ಕರುನಾಡ ಪ್ರಕೃತಿಯ ಮಡಿಲಲ್ಲಿ ಮಲಗಿರುವ ಕೊಟ್ಟಿಗೆಹಾರದ ಸಮೀಪದ ಕಿರು ಗ್ರಾಮ ಚಕ್ಕಮಕ್ಕಿಯಲ್ಲಿ ಡಿಸೆಂಬರ್ 1 ರ ಭಾನುವಾರ SKSSF ಆಯೋಜಿಸಲಾಗಿದ್ದ 2024 ರ ಜಿಲ್ಲಾ ಕಲೋತ್ಸವದಲ್ಲಿ ಸುಮಾರು 36 ಕಲಾ ಹಾಗೂ ಧಾರ್ಮಿಕ ಸ್ಪರ್ದಾ ಚಟುವಟಿಕೆಗಳಲ್ಲಿ ಭಾಗವಹಿಸಿ 17 ಪ್ರಥಮ, 8 ದ್ವಿತೀಯ, 4 ತೃತೀಯ ಸ್ಥಾನಗಳೊಂದಿಗೆ ಸುಮಾರು 29 ಬಹುಮಾನಗಳನ್ನು ಕೊಪ್ಪ ರೇಂಜ್ ಗೆ ದಕ್ಕಿಸಿಕೊಂಡಿರುವ ಕೊಪ್ಪದ ನೇತಾಜಿ ನಗರದ ವಿಧ್ಯಾರ್ಥಿಗಳಿಗೂ ಮಸೀದಿಯ ಮುಖ್ಯ ಗುರುಗಳಾದ ಸಿದ್ದೀಕ್ ದಾರಿಮಿ ಯವರಿಗೂ ಅಭಿನಂದನೆಗಳು, SKSSF ಕಲೋತ್ಸವ @ ಚಕ್ಕಮಕ್ಕಿ 2024ರ SKSSF ಚಿಕ್ಕಮಗಳೂರು ಜಿಲ್ಲಾ ಕಲೋತ್ಸವವು ಕರುನಾಡ ಪ್ರಕೃತಿಯ ಮಡಿಲಲ್ಲಿ ಮಲಗಿರುವ ಕಿರು ಗ್ರಾಮ ಚಕ್ಕಮಕ್ಕಿಯಲ್ಲಿ ನಡೆಯುತ್ತಿದೆಯೆಂದು ತಿಳಿದಾಗಿನಿಂದ ಆ ಕಲಾ ಉತ್ಸವದಲ್ಲಿ ಭಾಗಿಯಾಗಬೇಕೆನ್ನುವುದು ನನ್ನ ಮಹದಾಸೆಯಾಗಿತ್ತು, ಈ ಮಹದಾಸೆಗೆ ಕಾರಣ ಚಕ್ಕಮಕ್ಕಿಯು ಮಲೆನಾಡ ಸೌಂದರ್ಯ ಪ್ರದೇಶ ಎಂಬುವುದು ಮಾತ್ರವಲ್ಲ, ದೀನೀ ಪ್ರಭೋದನೆಗೆಂದು ಸ್ವಾತಂತ್ರ್ಯಾ ನಂತರ ಮಲಬಾರಿನಿಂದ ಆಗಮಿಸಿದ್ದ ನನ್ನ ಅಜ್ಜ(ಪಿತೃ ತಂದೆ) ಅಲವಿ ಮುಸ್ಲಿಯಾರರು ಹಲವು ವರ್ಷಗಳ ನಂತರ ವೃತ್ತಿ ಜೀವನಕ್ಕೆ ವಿಶ್ರಾಂತಿ ನೀಡಿದ ಜಮಾಅತ್, ಹಾಗೂ ನನ್ನ ಬಾಲ್ಯದ ಬಹುತೇಕ ದಿನಗಳನ್ನು ಆಸ್ವದಿಸಿದ ಮಣ್ಣು,ಅದಲ್ಲದೇ ಮಲೆನಾಡಿನ ಅದೆಷ್ಟೋ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ವಸತಿಯೊಂದಿಗೆ ದೀನೀ ಪ್ರಬೋದನೆಯನ್ನು ನೀಡುತ್ತಾ ಸೃಷ್ಟಿಕರ...