ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ!
| ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ! |
ಕಡಬ:- ಮದರಸ ಬಿಟ್ಟು ಮನೆಗೆ ತೆರಳುತಿದ್ದ ಬಾಲಕನಿಗೆ ನಾಯಿಯೊಂದು ಕಡಿದು ಗಾಯಗೊಳಿಸಿದ ಘಟನೆ ಕಡಬ ಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಗಾಯಾಳು ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದ್ದು, ಬಾಲಕನನ್ನು ಕಚ್ಚಿದ ಆ ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ.
ನಾಯಿ ಕಡಿತದ ಗಾಯಾಳು, ಮನೆಗೆ ತೆರಳುತ್ತಿದ್ದ ಹೊತ್ತಿನಲ್ಲಿ ನಾಯಿಯೊಂದು ಎರಗಿ ಕೈಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ತಕ್ಷಣ ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬಾಲಕನಿಗೆ ನಾಯಿ ಕಡಿದುದರಿಂದ ಉದ್ರೀಕ್ತಗೊಂಡ ಕೆಲವರು ಆ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮಾಹಿತಿ ಒದಗಿಸಿದ್ದಾರೆ.
ಕಚ್ಚಿದ ನಾಯಿ ಹುಚ್ಚು ನಾಯಿಯೆಂದು ಕೆಲವರು ಆರೋಪಿಸಿದ್ದಾರೆ. ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು. ಹಾಗಾಗಿ ಆ ಪೈಕಿ ಒಂದು ನಾಯಿ ಇದು ಆಗಿರಬಹುದು ಎಂದು ಶಂಕಿಸಲಾಗಿದೆ.
Comments
Post a Comment