ಅಪರಿಚಿತನ ಕೈಚಳಕ, ಎಟಿಎಂನಲ್ಲಿ ಹಣ ಡ್ರಾ ಮಾಡಲು ಕಾರ್ಡ್ ನೀಡಿ 19 ಸಾವಿರ ರೂ . ಕಳೆದುಕೊಂಡು ಠಾಣೆ ಮೆಟ್ಟಿಲೇರಿದರು !


 ಕೊಳ್ಳೇಗಾಲ : ಎಟಿಎಂ ಉಪಯೋಗಿಸಲು ಬಾರದಿದ್ದ ವ್ಯಕ್ತಿ ಅಪರಿಚಿತನಲ್ಲಿ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಲು ಹೇಳಿ ವಂಚನೆಗೊಳಗಾದ ಘಟನೆ ಕೊಳ್ಳೇಗಾಲದದಲ್ಲಿ ನಡೆದಿದೆ . ಕೊಳ್ಳೇಗಾಲದ ಕೆನರಾ ಬ್ಯಾಂಕ್ ಎಟಿಎಂಗೆ 2-3 ದಿನಗಳ ಹಿಂದೆ ಜಾಗೇರಿ ಗ್ರಾಮದ ಶೇಶುರಾಜ್ ಎಂಬವರು ಹಣ ಡ್ರಾ ಮಾಡಲು ಹೋಗಿದ್ದಾರೆ . ಆದರೆ ಅವರಿಗೆ ಎಟಿಎಂ ಬಳಕೆ ಮಾಡಲು ಬಾರದಿದ್ದ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ನೀಡಿ 500 ರೂ . ಡ್ರಾ ಮಾಡಿಕೊಡಲು ಹೇಳಿದ್ದಾರೆ . ಅದರಂತೆ ಆತ ಹಣ ಡ್ರಾ ಮಾಡಿ ನೀಡಿದ್ದು , ಇವರು ಪಡೆದು ಕೊಂಡು ಮನೆಗೆ ಬಂದಿದ್ದಾರೆ . ಆದರೆ ಅದಾಗಿ ಒಂದು ದಿನದ ಬಳಿಕ ಶೇಶುರಾಜ್ ಖಾತೆಯಿಂದ 19 ಸಾವಿರ ರೂ . ಡ್ರಾ ಆಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ . ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ ಹೇಗೆ ಹಣ ಯಾವ ರೀತಿ ಡ್ರಾ ಆಗಿದೆ ಎಂದು ಶೇಶುರಾಜ್‌ಗೆ ಆಶ್ಚರ್ಯವಾಗಿದೆ . ತಕ್ಷಣ ಅವರು ತಮ್ಮ ಎಟಿಎಂ ಕಾರ್ಡ್ ಪರಿಶೀಲನೆ ನಡೆಸಿದಾಗ ಅದು ಬೇರೆ ಎಟಿಎಂ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ .

ಜಾಹೀರಾತು, 



ಈ ಹಿಂದೆ ಯಾರ ಕೈಗೆ ಎಟಿಎಂ ಕಾರ್ಡ್ ಕೊಟ್ಟಿದ್ದೆ ಎಂದು ಜ್ಞಾಪಿಸಿದ್ದಾರೆ . ಆಗ ಈ ವಿಚಾರ ತಿಳಿದು ಬಂದಿದೆ . ಈ ಹಿನ್ನೆಲೆಯಲ್ಲಿ ಮಾ .24 ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ . 2-3 ದಿನಗಳ ಹಿಂದೆ ಎಟಿಎಂಗೆ ತೆರಳಿ 500 ರೂ . ತೆಗೆದುಕೊಡೋಕೆ ಎಂದು ಅಪರಿಚಿತನಲ್ಲಿ ಕಾರ್ಡ್ ಕೊಟ್ಟಿದ್ದೆ . ಆಗ ಅವನು ನನ್ನ ಕಾರ್ಡ್ ಬದಲಾಯಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ . ಇದೀಗ ಒಂದು ದಿನದ ಬಳಿಕ ಯಳಂದೂರಿನ ಎಟಿಎಂವೊಂದರಲ್ಲಿ 19 ಸಾವಿರ ರೂ.ಡ್ರಾ ಮಾಡಿದ್ದಾನೆ . ಅವನನ್ನು ಹುಡುಕಿ ಹಣ ವಾಪಸ್ ಕೊಡಿಸಿ ಎಂದು ದೂರು ನೀಡಿದ್ದಾರೆ .




Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?