ಬಿದರಗೋಡು :- ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವು,
ತೀರ್ಥಹಳ್ಳಿ,
ಬಿದರಗೋಡು :- ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವು,
ತೀರ್ಥಹಳ್ಳಿ (ವಾರ್ತಾ ಸಾರಥಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡಿನ ಹೊಸಳ್ಳಿ ಬಳಿ ಈ ಘಟನೆ ನಡೆದಿದ್ದು ಬೈಕ್ ಸವಾರ ಅಗಸರ ಕೋಣೆಯ ಶರತ್ (35)ಹಾಗೂ ಪಿಕಪ್ ವಾಹನ ದಲ್ಲಿದ್ದ ಇನ್ನೊರ್ವ ವ್ಯಕ್ತಿ ಕೇರಳ ದವರೆಂದು ತಿಳಿದು ಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿದರಗೋಡು ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಗೆ ಪಿಕಪ್ ವಾಹನ ಏಕಾಏಕಿ ಡಿಕ್ಕಿ ಯಾಗಿದ್ದು ಬೈಕ್ ನಲ್ಲಿದ್ದ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನೂ ಪಿಕಪ್ ವಾಹನ ವೇಗವಾಗಿ ಚಲಿಸುತ್ತಿದ್ದ ಕಾರಣ ಪಿಕಪ್ ನಲ್ಲಿಕುಳಿತಿದ್ದ ಕೇರಳದ ವ್ಯಕ್ತಿ ಬಾವಿಕೆಲಸ ಮಾಡುವವ ರೆಂದು ತಿಳಿದಿದ್ದು ಗುಂಡಿಗೆ ಬಿದ್ದಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದು ಪಿಕಪ್ ಚಾಲಕ ಸಂತೋಷ್ ಸ್ಥಳದಿಂದ ಪರಾರಿ ಯಾಗಿರುವುದು ತಿಳಿದಿರುತ್ತದೆ.
ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿರುತ್ತಾರೆ.
ವರದಿ,ಶಬ್ಬೀರ್ ಅಹ್ಮದ್ hh ಪುರ

Comments
Post a Comment