Posts

Showing posts from January, 2022

ಮತ್ತೂಮ್ಮೆ ಡ್ರೋನ್ ಪ್ರತಾಪ್ ಕಥೆಯನ್ನು ನೆನಪಿಸುತ್ತಿರುವ ನೊಂದ ವಿದ್ಯಾರ್ಥಿ ಡಾ. ಗಗನ್ ಕುಬೇರ್..

 ಮತ್ತೂಮ್ಮೆ ಡ್ರೋನ್ ಪ್ರತಾಪ್ ಕಥೆಯನ್ನು ನೆನಪಿಸುತ್ತಿರುವ ನೊಂದ  ವಿದ್ಯಾರ್ಥಿ ಡಾ. ಗಗನ್ ಕುಬೇರ್...... 2021 ರ ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದೂ... ಬ್ರಾಹ್ಮಣರಾಗಿರುವುದರಿಂದ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟು ಸಿಗದೆ ಅನ್ಯಾಯಕ್ಕೆ ಒಳಗಾದ ನೊಂದ ವಿದ್ಯಾರ್ಥಿ..... ಡಾ. ಗಗನ್ ಕುಬೇರ್...... ಇದಕ್ಕೆ ಕಾರಣ ಮೀಸಲಾತಿ... ಎನ್ನುವ ಅವಸರದ ಸುದ್ದಿಯೊಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತದೆ..... ಕೂಡಲೆ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಅವಸರವಾಗಿ ಈ ಸುದ್ದಿ ಹರಿದಾಡಲಾರಂಬಿಸುತ್ತದೆ.... ಆದರೆ, ಇದು ಸತ್ಯ ಸಂಗತಿಯೇ... ಎಂದು ಹುಡುಕಿ ನೋಡಿದರೆ ಇಲ್ಲಿ ನೆನಪಾಗುವುದು ಡ್ರೋನ್ ಪ್ರತಾಪ್.... ಆ ಮನುಷ್ಯನ ಸುದ್ದಿ ಕೂಡ ಇದೇ ರೀತಿ ಹರಿದಾಡಿ ಒಬ್ಬ ಅರ್ಹನಲ್ಲದವನನ್ನು ಉಪ್ಪರಿಗೆ ಮೇಲೆ ಕೂರಿಸಿ ಬೆಪ್ಪರಾದವರು ನಾವುಗಳು.... ಈಗ ಅದೇ ತಪ್ಪು ಮತ್ತೆ ಮಾಡಲು ಹೊರಟಿರುವ ಕೆಲವರಿಗೆ ಒಂದು ಕಿವಿಮಾತು.... ಅವಸರವೇ ಅಪಘಾತಕ್ಕೆ ಕಾರಣವಲ್ಲವೇ... ? ಹಾಗಾಗಿ ತಾಳ್ಮೆಯಿಂದ 2021 ರ ನೀಟ್ ಪರೀಕ್ಷೆಯ ಸ್ಥಾನ(RANK) ಪಟ್ಟಿಯನ್ನು ಪರಿಶೀಲಿಸಿ ನೋಡಿ.... ಅಲ್ಲಿ ಡಾ. ಗಗನ್ ಕುಬೇರ್ ಹೆಸರು ಇದ್ದ ಹಾಗೆ ಇಲ್ಲ..... ಆದರೂ ಒಂದು ವಿನಂತಿ ನನ್ನಿಂದ ಹುಡುಕುವ ವಿಚಾರವಾಗಿ ತಪ್ಪಾಗಿದ್ದು  ಡಾ. ಗಗನ್ ಕುಬೇರ್ ರವರು ಪ್ರಥಮ ಸ್ಥಾನ ಪಡೆದಿರುವುದು ನಿಜವಾಗಿದ್ದರೆ ದಯವಿಟ್ಟು ಅದರ ವಿವರವನ್ನು ...

ಜಯಪುರ,ವಿಜೃಂಭಣೆಯಿಂದ ನಡೆದ ಗುಡ್ಡದ ಅಜ್ಜಿಯ ವಾರ್ಷಿಕೋತ್ಸವ,

Image
ವರದಿ:- ವೀರಮಣಿ  ಕೊಪ್ಪ:- ತಾಲ್ಲೂಕು ಜಯಪುರ ಗ್ರಾಮ ಪಂಚಾಯಿತಿ ಅಲಗೇಶ್ವರ ಎಸ್ಟೇಟ್ ನಾ ಗಾಳಿಗಂಡಿ ಗ್ರಾಮ ದಲ್ಲಿ ಗುಡ್ಡೆದ ಅಜ್ಜಿಯ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು, ಅಲಗೇಶ್ವರ ಎಸ್ಟೇಟ್ ದಿಂದ ಸುಮಾರು 2 km ದೂರದಲ್ಲಿ ಇರುವ ಗಾಳಿಗಂಡಿ  ಎಂಬ ಒಂದು ಸಣ್ಣ ಗ್ರಾಮದಲ್ಲಿ ಗುಡ್ಡದ ಅಜ್ಜಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು  ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ  ಊರಿನ ಗ್ರಾಮಸ್ಥರೆಲ್ಲ ಸೇರಿ ಯಶಸ್ವಿಗೊಳಿಸಿದರು,  

ಅರ್ಚಕನಿಂದ ಬಾಲಕಿಯ ಮೇಲೆ ಅತ್ಯಾಚಾರ ,ಚಾಮರಾಜನಗರ

Image
  ಚಾಮರಾಜನಗರ:- ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ದೇವಸ್ಥಾನದ ಚಾಮರಾಜನಗರ ಜಿಲ್ಲೆಯ ಅರ್ಚಕರೊಬ್ಬರನ್ನು ಬೇಡಗುಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ .  ಚಾಮರಾಜನಗರ , ಜ .25 : ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಚಾಮರಾಜನಗರ ಜಿಲ್ಲೆಯ ಬೇಡಗುಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ . 17 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು ಅದೇ ಗ್ರಾಮದ ಬಸವೇಶ್ವರ ದೇವಾಲಯದ ಎಂಬಾತನನ್ನು ಅರ್ಚಕ ರವಿ ( 23 ) ಪೊಲೀಸರು ಬಂಧಿಸಿದ್ದಾರೆ . ಸಂತ್ರಸ್ತೆಯನ್ನು ಬಾಲಕಿಯರ ಬಾಲಮಂದಿರದ ವಶಕ್ಕೆ ನೀಡಲಾಗಿದೆ . ಆಶಾ ಕಾರ್ಯಕರ್ತೆ ಹಾಗೂ ಪಿಡಿಓ ಗ್ರಾಮದಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾಗ ಬಾಲಕಿಯನ್ನು ಅನುಮಾನಗೊಂಡಿದ್ದು ಬಾಲಕಿಯನ್ನು ಕಂಡು ವಿಚಾರಿಸಿದ್ದರು . ಬಳಿಕ ವೈದ್ಯರಿಂದ ತಪಾಸಣೆ ನಡೆಸಿದ್ದು ಬಾಲಕಿ 7 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿತ್ತು . ಕಾರಣ ಯಾರೆಂದು ವಿಚಾರಿಸಿದಾಗ ಅದೇ ಗ್ರಾಮದ ಅರ್ಚಕ ರವಿ ತನ್ನನ್ನು ಮರುಳು ಮಾಡಿ ನಿರಂತರ ಅತ್ಯಾಚಾರ ಎಸಗಿದ ವಿಷಯ ಬೆಳಕಿಗೆ ಬಂದಿದೆ . ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .

ಬಾಳೆಹೊನ್ನೂರು ಸಮೀಪ ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಬೈಕ್ ಸವಾರನ ದುರ್ಮರಣ,

Image
 ವರದಿ:-ವೀರಮಣಿ  ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಬೆಳಸೆ ಖಾಂಡ್ಯ ಕ್ಲಬ್ ಬಳಿ ಬೈಕ್ ಹಾಗೂ ಬಸ್ಸಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ಚಿಕ್ಕಮಗಳೂರಿನಿಂದ ಶೃಂಗೇರಿ ಕಡೆಗೆ ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕಿನ ನಡುವೆ ಈ ಅಪಘಾತ ಉಂಟಾದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು . ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು . ಪೊಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ .

ತನ್ನ ಖಾತೆಗೆ ಬಂದ 1.5 ಕೋಟಿ ಹಣವನ್ನು ಹಿಂದಿರುಗಿಸಿದ ಕನ್ನಡಿಗ !

Image
ಕುವೈತ್: ಕುವೈತ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು, ಕಂಪನಿ ಮಾಲೀಕರು ತಪ್ಪಾಗಿ ತಮ್ಮ ಖಾತೆಗೆ ಜಮೆ ಮಾಡಿದ್ದ ಸುಮಾರು 1.5 ಕೋಟಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕಾಗಿ ಕಂಪನಿ ಮಾಲೀಕರು, ಬ್ಯಾಂಕಿನಿಂದ ದೊಡ್ಡ ಮೊತ್ತದ ನಗದು ಹಣ, ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ.   ಕರ್ನಾಟಕದ ಬೆಂಗಳೂರಿನ ಸುನಿಲ್ ಡೊಮಿನಿಕ್ ಡಿಸೋಜಾ ಕಳೆದ 10 ವರ್ಷಗಳಿಂದ ಕುವೈತ್ ನ N B T C, ಎಂಬ ಕಂಪನಿಯಲ್ಲಿ ಎಸಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಈ  ಕಂಪನಿಯಿಂದ ಅವರು ನಿವೃತ್ತರಾಗಿ ಮನೆಗೆ ಮರಳಲು ನಿರ್ಧರಿಸಿದ್ದರು. ಇದರಿಂದ ಕಂಪನಿ ಮಾಲೀಕರು ಡಿಸೋಜಾ ಅವರ ಹಲವು ವರ್ಷಗಳ ಸೇವೆಗೆ ಸಂಬಂಧಿಸಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಆದರೆ, ಡಿಸೋಜಾ ಅವರಿಗೆ ನೀಡಬೇಕಿದ್ದ ಹಣಕ್ಕಿಂತ 30 ಪಟ್ಟು ಹೆಚ್ಚು ಹಣ ಅವರ ಬ್ಯಾಂಕ್ ಖಾತೆಗೆ ತಪ್ಪಾಸಿ ವರ್ಗಾವಣೆ ಆಗಿತ್ತು. ಅದು ಕೂಡಾ ಒಟ್ಟು 62,859 ಕುವೈತ್ ದಿನಾರ್ ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ. 1.5 ಕೋಟಿ ರೂ) ಜಮಾ ಮಾಡಿದ್ದರು. ಇದನ್ನು ಡಿಸೋಜಾ ಕೂಡಲೇ NBTC ಆಡಳಿತ ಮಂಡಳಿ ಗಮನಕ್ಕೆ ತಂದರು. ಈ ವಿಷಯವನ್ನು ಕಂಪನಿ ಮಾಲೀಕರಿಗೆ ಬ್ಯಾಂಕ್ ಗೆ ತಿಳಿಸಿದರು. ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯಿಂದ ಡಿಸೋಜಾ ಅವರ ಖಾತೆಗೆ ಇಷ್ಟು ದೊಡ್ಡ ಮೊತ್ತ ಜಮಾ ಆಗಿರವುದನ್ನು ಕಂಡುಕೊಂಡಿತು. ಅವರಿ...

ಪೊಲೀಸ್ ಹುದ್ದೆ ಪರೀಕ್ಷೆಯಲ್ಲಿ 39ನೇ ರ‍್ಯಾಂಕ್ ಪಡೆದ ಮುಸ್ಲಿಂ ಯುವತಿ,

Image
  ಮಂಗಳೂರು: ಕಡಬ ಗ್ರಾಮೀಣ ಭಾಗದ ಬಡ ಮುಸ್ಲಿಂ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ. ಕುಂತೂರು ಸಮೀಪದ ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನಿಶಾ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಪೊಲೀಸ್ ಉದ್ಯೋಗ ಗಿಟ್ಟಿಸೊಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಪಡೆದಿರುವ ಈಕೆ, ಪ್ರೌಢಶಾಲಾ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಹಾಗೂ ಪಿಯುಸಿ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್  ಸೈನ್ಸಸ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿಎಸ್ಸಿ ಕೃಷಿ ಪದವಿಯನ್ನು ಪಡೆದಿರುತ್ತಾರೆ.

ಮೂಡಗೆರೆ,ತೋಟಕ್ಕೆ ಬೆಂಕಿ,ಸಂಪೂರ್ಣ ನಾಶ,

Image
 ವರದಿ:-ವೀರಮಣಿ  ಚಿಕ್ಕಮಗಳೂರು:- ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ ಎಂಬುವವರಿಗೆ ಸೇರಿದ ಸುಮಾರು ಮೂರು ಎಕರೆ ತೋಟಕ್ಕೆ ಬೆಂಕಿ ಬಿದ್ದು ಸಂಪೂರ್ಣ ನಾಶವಾಗಿದೆ. ತೋಟದಲ್ಲಿ ಬೆಳೆದ ಅಡಿಕೆ ಮತ್ತು  ಕಾಫಿ ಗಿಡಗಳು  ಬೆಂಕಿಗೆ ಆಹುತಿಗೆ ಸಂಪೂರ್ಣ ನಾಶವಾಗಿದೆ, ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಈ ತೋಟ ಕೆಲವರ್ಷಗಳ ಹಿಂದೆ ಗಿಡಗಳನ್ನು ನಾಟಿ ಮಾಡಲಾಗಿತ್ತು,  ಸಂಪೂರ್ಣ ನಾಶವಾಗಿರುವುದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗಿದೆ, 2000 ಅಡಿಕೆ ಗಿಡ ...2000 ಕಾಫಿ ಗಿಡ ಬೆಂಕಿಗಾಹುತಿ, ಆಕಸ್ಮಿಕವಾಗಿ ಬೆಂಕಿ ಹತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ,!

ಕೊಪ್ಪ -ಕಾರಿನ ಟೈಯರ್ ಬ್ಲಾಸ್ಟ್ ಹರಿಹರಪುರ ಮಾರ್ಗದಲ್ಲಿ ಅಪಘಾತ : ಇಬ್ಬರ ದುರ್ಮರಣ,

Image
ವರದಿ:-ವೀರಮಣಿ  ಕೊಪ್ಪ : ಸಿಗಾದಳು ಹಾಗೂ ಹರಿಹರಪುರ ಮಾರ್ಗಮಧ್ಯದಲ್ಲಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಉಂಟಾಗಿದ್ದು ಸ್ಥಳದಲ್ಲಿಯೇ ಇಬ್ಬರು ಸಾವಾನ್ನಪ್ಪಿದ್ದಾರೆ,   ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತೀರುವಾಗ ಅಪಘಾತ ನಡೆದಿದೆ . ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಕೊಪ್ಪದ ಗುಣವಂತೆ ಮೆಡಿಕಲ್'ನ ಮಾಲೀಕರಾದ ರಾಜಶೇಖರ್ ಹಾಗೂ ಆಲ್ಲೂರಿನ ಮಣಿಕಂಠ ಎಂಬುವವರು ಮೃತರಾಗಿದ್ದರೆ. ಕಾರಿನಲ್ಲಿ ಇನ್ನೂಳಿದ ಇಬ್ಬರಿಗೆ ಗಾಯವಾಗಿದೆ . ಕಾರು ಸಂಪೂರ್ಣ ಜಖಂಗೊಂಡಿದ್ದು , ಹರಿಹರಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ . ಪೊಲೀಸರಯ ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ .  

ಗ್ರಾಮ ಪಂಚಾಯತಿ ಕದನ, ಬಿ ಜೆ ಪಿ / ಕಾಂಗ್ರೆಸ್,ಕೋಣಂದೂರ್

Image
 ವರದಿ:-ವೀರಮಣಿ  ಬಿಜೆಪಿ ಹಾಗೂ ಕಾಂಗ್ರೆಸ್ ಗ್ರಾಮಪಂಚಾಯತ್ ಸದಸ್ಯರ ನಡುವೆ ಮಾರಾಮಾರಿ ; ಇಬ್ಬರು ಆಸ್ಪತ್ರೆ ದಾಖಲು, ಪಂಚಾಯಿತಿಯಲ್ಲಿ ಸಭೆ ನಡೆಯುವಾಗ ಕೆರೆ ಅಭಿವೃದ್ಧಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯರೇ ಹೊಡೆದಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ . ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಕೆರೆ ಅಭಿವೃದ್ಧಿಯ ಕುರಿತಾಗಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ . ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುರೇಶ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ . ಒಬ್ಬರು ತೀರ್ಥಹಳ್ಳಿ ಇನ್ನೊಬ್ಬರು ಕೋಣಂದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ಘಟನಾ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ,!

Image
 ಬೆಂಗಳೂರು: ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ ಅಪಾಯವನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಠಿಣ ಕ್ರಮ ಜಾರಿಗೆ ತಂದಿದೆ. ಅದರಂತೆ ಐದೂವರೆ ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಇಂದು ರಾತ್ರಿ 8 ರಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಸುಮಾರು 57 ಗಂಟೆಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳು ಬಂದ್​ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಹೋಟೆಲ್‌ಗಳು, ಬಾರ್ ಅಂಡ್​ ರೆಸ್ಟೋರೆಂಟ್ ಸೇರಿದಂತೆ ಯಾವುದೇ ರೀತಿಯ ಸೇವೆಗಳು ವೀಕೆಂಡ್ ಕರ್ಫ್ಯೂನಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಿನಾಯಿತಿ ಪಡೆದಿರುವ 10, 11, 12 ತರಗತಿಗಳು ಕೂಡ ಬಂದ್​ ಆಗಲಿವೆ. ಕೇವಲ ಫುಡ್ ಡೆಲಿವರಿ ಬಾಯ್ಸ್, ಕೈಗಾರಿಕೆ, ಟಿಲಿಕಾಂ ಸೇರಿದಂತೆ ವಿನಾಯಿತಿ ಪಡೆದವರಿಗೆ ಮಾತ್ರ ಓಡಾಡುವುದಕ್ಕೆ ಅವಕಾಶವಿದೆ. ರಾಜ್ಯದಲ್ಲಿ ಒಮಿಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ರೆಡ್ ಜೋನ್ ಜಿಲ್ಲೆಯಾಗಿರುವ ಬೆಂಗಳೂರು ನಗರದಲ್ಲಿ 1 ರಿಂದ 9 ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಭೌತಿಕ ತರಗತಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಹೀಗಾಗಿ ಎಲ್ಲ ಕೋಚಿಂಗ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ವಿಕೆಂಡ್ ಕರ್...

ಮತ್ತೊಂದು ಓಮಿಕ್ರಾನ್ ಅಲೆಗಳು,ಲಾಕ್ ಡೌನ್, ಸೀಲ್ ಡೌನ್

Image
 ವರದಿ:- ವೇಣುಗೋಪಾಲ್ ಬೆಂಗಳೂರು  ಮತ್ತೊಮ್ಮೆ ಕೊರೋನಾ.... ಓಮಿಕ್ರಾನ್.... ಅಲೆಗಳು..... ಬಣ್ಣಬಣ್ಣದ ವಲಯಗಳು.... ಲಾಕ್ ಡೌನ್.... ಸೀಲ್ಡೌನ್..... ಆಕ್ಸಿಜನ್.... ಕರ್ಫ್ಯೂ..... ಮಾಸ್ಕ್..... ದಂಡಗಳು..... ವ್ಯಾಕ್ಸಿನ್.... ಇನ್ನೂ ಅನೇಕ ಅಲರ್ಜಿ ಪದಗಳು ಕಿವಿಗೆ ಅಪ್ಪಳಿಸುತ್ತಿವೆ..... ಈ ಪದಗಳಿಗೆ ಮಹತ್ವವಿದ್ದ ಕಾಲವೊಂದಿತ್ತು ಏಕೆಂದರೆ ಅಂದು ಇವುಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಲಾಗುತ್ತಿತ್ತು...... ಆದರೆ ಇಂದು ಈ ಪದಗಳನ್ನು ಅನಾವಶ್ಯಕವಾಗಿ ಹೇರಲಾಗುತ್ತಿದೆ ಎನ್ನುವುದು ಹೆಚ್ಚಿನವರ ಅಳಲಾಗಿದೆ.... ಇದಕ್ಕೆ ಪೂರಕವೆಂಬಂತೆ ಕೆಲ ಸನ್ನಿವೇಶಗಳು ನಿಮ್ಮ ಮುಂದೆ.... ಮೊದಲನೆಯದಾಗಿ ಪ್ರಜ್ಞಾವಂತ ವಲಯದಿಂದ ಮೂಡಿಬಂದ ಒಂದು ಪ್ರಶ್ನೆ..... ಪ್ರಧಾನಿ ಮೋದಿಯವರು ಪಂಜಾಬ್ ಭೇಟಿಗೆ ನಿರ್ಧರಿಸುವ ಮುನ್ನ ಆ ಕಾರ್ಯಕ್ರಮಕ್ಕೆ ಎಷ್ಟು ಜನ ಸೇರಬೇಕು..... ಸೇರಿದ ಜನರಲ್ಲಿ ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಬೇಕು... ಹಾಗೆಯೇ ಕೋವಿಡ್ ನಿಯಮಗಳನ್ನು ಹೇಗೆ ಪಾಲಿಸಬೇಕು.... ಎಂಬ ಕನಿಷ್ಠ ಮಾಹಿತಿ ರವಾನೆಯಾಗಿರಲಿಲ್ಲವೇ..... ಏಕೆಂದರೆ ಅಲ್ಲಿ ಯಾವುದೇ ಅಂತರಗಳಿಲ್ಲದೆ ಅಷ್ಟೊಂದು ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು..... ಪ್ರಮುಖವಾಗಿ ಇಂತಹ ಸಂದಿಗ್ಧ ಸಮಯದಲ್ಲಿ ಜನಗಳನ್ನು ಒಟ್ಟು ಸೇರಿಸಬಾರದು ಎನ್ನುವ ಪ್ರಜ್ಞೆ ಸಮಂಜಸವಲ್ಲವೆ....? ಅದೇ ಪ್ರಜ್ಞಾವಂತ ವಲಯದಿಂದ ಮೂಡಿಬಂದ ಮತ್ತೊಂದು ಪ್ರಶ್ನೆ... ಇತ್ತೀಚೆಗೆ ಕೆಲವೊಂದು ಸ...

ರಾಜ್ಯದ ರಾಜಧಾನಿಯಲ್ಲಿ ಶಾಲೆ ಬಂದ್!

Image
  ಬೆಂಗಳೂರು: ಕೊರೊನಾ ವೈರಸ್ ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ಬೆಂಗಳೂರಲ್ಲಿ 10 ಮತ್ತು 12 ನೇ ತರಗತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಬಂದ್‌ ಮಾಡಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ಅಲ್ಲದೇ ನೈಟ್‌ ಕರ್ಪ್ಯೂ ಮುಂದುವರಿಸುವುದರ ಜೊತೆಗೆ ರಾಜ್ಯದಾದ್ಯಂತ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ಇಂದು ರಾತ್ರಿಯಿಂದಲೇ ಹೊಸ ರೂಲ್ಸ್‌ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ಮತ್ತು ಸುಧಾಕರ್ ಅವರು ಜಂಟಿ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 10 ಮತ್ತು12 ನೇ ತರಗತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಎರಡು ವಾರದ ಮಟ್ಟಿಗೆ ಮುಚ್ಚಲಾಗುತ್ತದೆ. ಉಳಿದ ತರಗತಿಗಳಿಗೆ ಆನ್‌ಲೈನ್‌ ಕ್ಲಾಸ್‌ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ. ಜನವರಿ 5 ರಿಂದ ರಾತ್ರಿ 10 ಗಂಟೆಯಿಂದಲೇ ಹೊಸ ರೂಲ್ಸ್‌ ಜಾರಿಗೆ ಬರಲಿದೆ. ಜನವರಿ 6 ರಿಂದ ಎರಡು ದಿನಗಳ ಕಾಲ ವೀಕೆಂಡ್‌ ಕರ್ಪ್ಯೂ ಜಾರಿಗೆ ಬರಲಿದೆ. ಸದ್ಯ ಜಾರಿಯಲ್ಲಿರುವ ನೈಟ್‌ ಕರ್ಪ್ಯೂ ಯಥ...

ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್ !

Image
  Vartha sarathi  ನವದೆಹಲಿ:- ಮಾಲಿನ್ಯ ನಿಯಂತ್ರಣ ಮಾಡದ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಈಗಾಗಲೇ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದೆ . ಇದಾದ ಬಳಿಕ ದೆಹಲಿ ಸರ್ಕಾರ ಮತ್ತಷ್ಟು ಕಠಿಣ ನಿಯಮ ಜಾರಿಗೆ ಮುಂದಾಗಿದೆ . ಇತ್ತ ರಾಷ್ಟ್ರೀಯ ಹಸಿರು ಮಂಡಳಿ ನಿರ್ದೇಶನದ ಪ್ರಕಾರ 10 ವರ್ಷಕ್ಕಿಂತ ಹಳೇಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲು ದೆಹಲಿ ಸರ್ಕಾರ ಮುಂದಾಗಿದೆ . ಜನವರಿ 1 , 2022 ರಿಂದ 10 ವರ್ಷ ಹಳೆಯ ಡೀಸೆಲ್ ವಾಹನದ ನೋಂದಣಿ ರದ್ದು ಮಾಡಲಾಗುತ್ತಿದೆ . ಜನವರಿ 1 , 2022 ರಿಂದ ಹಳೇ ಡೀಸೆಲ್ ವಾಹನ , ಅಂದರೆ 10 ವರ್ಷಕ್ಕಿಂತ ಹಳೇಯ ವಾಹನವನ್ನು ರಸ್ತೆಗಿಳಿಸಿದರೆ ದಂಡ ಖಚಿತ . ಇನ್ನೂ ಹಳೇಯ ವಾಹನವನ್ನು ರಸ್ತೆಗಳಿಸಲೇಬೇಕು ಎಂದರೆ ಒಂದು ಅವಕಾಶವಿದೆ . ಹಸಿರು ನ್ಯಾಯ ಮ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ( NOC ) ಪಡೆದಿರಬೇಕು . ಹಾಗಂತ ಹೆಚ್ಚು ಖುಷಿ ಪಡಬೇಕಿಲ್ಲ . ಕಾರಣ NOC ಪಡೆಯುವುದು ಈ ಹಿಂದಿನಷ್ಟು ಸುಲಭವಲ್ಲ . ಇಷ್ಟೇ ಅಲ್ಲ 15 ವರ್ಷಕ್ಕಿಂತ ಹಳೇಯ ಡೀಸೆಲ್ ವಾಹನಕ್ಕೆ NOC ಕೂಡ ಸಿಗುವುದಿಲ್ಲ . ಹೀಗಾಗಿ ಗುಜುರಿಗೆ ಹಾಕಲೇಬೇಕು 2016 ರಲ್ಲಿ NGT ದೆಹಲಿ ಹಾಗೂ ರಾಷ್ಟ್ರರಾಜಧಾನಿ ವಲಯದಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೇಯ ಪೆಟ್ರೋಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲು ನಿರ್ದೇಶಿಸಿತ್ತು . ಆದರೆ ಈ ನಿರ್ದೇಶವನ್ನು ದೆಹಲಿ ಸರ್ಕಾರ ಇದೀಗ ಪರಿಣಾ...