Posts

Showing posts from December, 2021

ಬಾಳೆಹೊನ್ನೂರು ಸಮೀಪ ಭೀಕರ ಅಪಘಾತ,ಸ್ಥಳದಲ್ಲಿ ಓರ್ವ ಮೃತ್ಯು,

Image
 ವರದಿ:- ವೀರಮಣಿ  ಬಾಳೆಹೊನ್ನೂರ್:- ಸೀಗೊಡು ಸಮೀಪ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಇಟ್ಟಿಗೆ ಸೀಗೋಡಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಶೃಂಗೇರಿಯಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಟಾಟಾ ನೆಕ್ಸಾನ್ ವಾಹನವೊಂದು ರಭಸವಾಗಿ ಮರಕ್ಕೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ . ಬೆಂಗಳೂರು ಮೂಲದ ವಾಹನ ಇದಾಗಿದೆ ಎಂದು ತಿಳಿದುಬಂದಿದೆ . ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಐದು ಜನರಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ವ್ಯಕ್ತಿಯ ಸ್ಥಿತಿ ಬಹಳ ಗಂಭೀರವಾಗಿದ್ದು ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಘಟನಾ ಸ್ಥಳಕ್ಕೆ ಕೂಡಲೇ ಸ್ಥಳೀಯರು ಧಾವಿಸಿ ವಾಹನದಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದ್ದಾರೆ . ಓರ್ವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಹಾಗೂ ಉಳಿದ ಗಾಯಾಳುಗಳನ್ನು ಬಾಳೆಹೊನ್ನೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ .

ಸಾಗರ, ಅರಣ್ಯ ಇಲಾಖೆ ಪೋಲಿಸ್ ಇಲಾಖೆ ಜಂಟಿ ಕಾರ್ಯಚರಣೆ,

Image
 ವರದಿ:- ವೀರಮಣಿ  ಸಾಗರ:- ತಾಲ್ಲೂಕಿನ   ಚಿಪ್ಳಿ ಲಿಂಗದಳ್ಳಿ ವ್ಯಾಪ್ತಿಯಲ್ಲಿ 27/12/2021 ರಾತ್ರಿ ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿಯಾಗಿ  ಪುರುಷೋತ್ತಮ ಎನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು,  ಆರೋಪಿಯ ಮನೆಯಲ್ಲಿ ಇದ್ದ  ಶ್ರೀ ಗಂಧದ ತುಂಡುಗಳು  ಬೀಟೆ ನಾಟ  ಮತ್ತು ಅಕ್ರಮ ಬಂದೂಕು ವಶಪಡಿಸಿಕೊಂಡು  ಅರಣ್ಯ ಮೊಕದ್ದಮೆ ಕಾಯ್ದೆ 132/21_22 ಪ್ರಕರಣ ದಾಖಲಾಗಿದೆ,  ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಇನ್ಸಪೆಕ್ಟರ್ ಗಿರೀಶ್,  ಹಾಗು ಪೋಲಿಸ್ ಸಿಬ್ಬಂದಿಗಳು  ಮತ್ತು ಸಾಗರ ಶಾಖೆಯ  ಉಪವಲಯ ಅರಣ್ಯ ಅಧಿಕಾರಿ  ಅಶೋಕ್‌, ಅರಣ್ಯ ರಕ್ಷಕರಾದ ಪ್ರದೀಪ್,  ಶಿವಾನಂದ,  ಸುಮಿತ್ರ  ಲೋಕೇಶ್,  ವಲಯ ಅರಣ್ಯ ಅಧಿಕಾರಿ ಪ್ರಮೋದ್ ನೇತೃತ್ವದಲ್ಲಿ ದಾಳಿ ನೆಡೆಸಿ  ಆರೋಪಿಯನ್ನು ನ್ಯಾಯಂಗ  ಬಂದನಕ್ಕೆ ಒಪ್ಪಿಸಿದ್ದಾರೆ.

ರಿಪ್ಪನ್ ಪೇಟೆಯ ಗರ್ತಿಕೆರೆ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ...!

Image
  ವರದಿ:-ವೀರಮಣಿ  ರಿಪ್ಪನ್‌ಪೇಟೆ:- ಸಮೀಪದ ಗರ್ತಿಕೆರೆಯಲ್ಲಿ ಗುರುವಾರ ರಾತ್ರಿ ಕೊಲೆಯಾದ ಸ್ಥಿತಿಯಲ್ಲಿ ಪುರುಷನ ಶವ ಪತ್ತೆಯಾಗಿದೆ. ಮೃತವ್ಯಕ್ತಿಯನ್ನು ಗರ್ತಿಕೆರೆ ಗ್ರಾಮದ ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ, ಎಂದು ಗುರುತಿಸಲಾಗಿದೆ. ಸತೀಶ್ ಶೆಟ್ಟಿ ಸಾವಿಗೂ ಮುನ್ನ ಗರ್ತಿಕೆರೆಯ ಕೋಳಿ ಪಯಾಜ್,ಗರ್ತಿಕೆರೆಯ ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಸತೀಶ್ ಶೆಟ್ಟಿಯ ಮನೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸತೀಶ ಶೆಟ್ಟಿ ಹಾಗೂ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಜಗಳವಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಮಾರಕಾಸ್ತ್ರಗಳಿಂದ ಸತೀಶ್ ಶೆಟ್ಟಿ (53)ಯನ್ನು ಕೊಲೆ ಮಾಡಿ ಗರ್ತಿಕೆರೆ ಬಳಿಯ ಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿರುವ ಕೆರೆಗೆ ಶವನ್ನು ಬಿಸಾಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಗ್ರಾಮಸ್ಥರು ಆರೋಪಿ ಕೋಳಿ ಪಯಾಜ್ ನನ್ನು  ಹಿಡಿದು  ಪೊಲೀಸರಿಗೆ ಒಪ್ಪಿಸಿದ್ದಾರೆ.ಇನ್ನೋರ್ವ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಹೊಸ ವರ್ಷ ಹಾಗೂ ಕ್ರಿಸ್ ಮಸ್ ಹಬ್ಬಕ್ಕೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ.!

Image
 ವರದಿ:- ವೀರಮಣಿ  ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ  ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.  ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ. ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ. ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು.  ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ. ಆದರೆ 25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಅವುಗಳಿಗೂ ಕೆಲವೊಂದು ನಿಯಮ ಮಾಡಲಾಗಿದೆ. ಕ್ರಿಸ್‌ಮಸ್‌ ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ. * ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ, ಸೆನಿಟೈಸರ್‌ ಎಲ್ಲವನ್ನೂ ಕಾಪಾಡಬೇಕು. ಕ್ಲಬ್‌ಗೆ ಬರುವವರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ಮಾಡಿಸಬೇಕು.

ಕುಂಡಡ್ಕ ದೈವಸ್ಥಾನದಲ್ಲಿ ಬಿಲ್ಲವ ಸಮಾಜದವರಿಗೆ ಪ್ರವೇಶ ನಿಷೇಧ,!

Image
  ಬಂಟ್ವಾಳ: ದೈವಸ್ಥಾನಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಬಿಲ್ಲವ ಸಮಾಜದ ಯುವಕರನ್ನು ಹೊರಗೆ ಕಳುಹಿಸಿದ ಘಟನೆ ವಿಟ್ಲ ಮೂಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಗ್ರಾಮದ ಪಿಲಿಂಜ ಎಂಬಲ್ಲಿ ನೂತನ ದೈವಸ್ಥಾನ ನಿರ್ಮಾಣಗೊಂಡಿದ್ದು, ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗ್ರಾಮ ಸಂಬಂಧಿತ ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಜತೆ ಬಿಲ್ಲವ ಸಮಾಜದ ಇಬ್ಬರು ಯುವಕರು ಇತರರೊಂದಿಗೆ ತೆರಳಿದ್ದು, ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿ ಅಧ್ಯಕ್ಷರಲ್ಲಿ ದೈವಸ್ಥಾನದ ಒಳಾಂಗಣಕ್ಕೆ ಬಿಲ್ಲವರು ಬರುವಂತಿಲ್ಲ ಎಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಕೇಳಿಸಿಕೊಂಡ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಯುವಕರನ್ನು ಹೊರ ಹೋಗುವಂತೆ ತಿಳಿಸಿದ್ದು, ಯುವಕರು ಈ ವಿಚಾರವನ್ನು ಬಿಲ್ಲವ ಸಮಾಜ ಮುಖಂಡರುಗಳಲ್ಲಿ ತಿಳಿಸಿದ್ದಾರೆ. ಅಲ್ಲದೆ ಇದೇ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು. ಈ ನಡುವೆ ಯುವಕರನ್ನು ಕರೆದುಕೊಂಡು ಹೋಗಿದ್ದ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ. ಬಿಲ್ಲವರ ವಾಟ್ಸ್ ಆ್ಯಪ್ ಗ್ರೂಪುಗಳಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು ಶನಿವಾರ ಸಂಜೆ ಕುಂಡಡ್ಕ, ವಿಟ್ಲ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿಟ್ಲ ಯುವವಾಹಿನಿ ಸದಸ್ಯರು ಖಂಡನ...

ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ,

 ವರದಿ:- ವೀರಮಣಿ  ಚಿಕ್ಕಮಗಳೂರು ಹೆದ್ದಾರಿ ಕಾಮಗಾರಿ ವಿಳಂಭಕ್ಕೆ ಸ್ಥಳೀಯರ ತರಾಟೆ Pwd ಇಂಜಿನಿಯರ್ ಗೆ ಸ್ಥಳೀಯರ ತರಾಟೆ ಕುದುರೆಮುಖ ಸರ್ಕಲ್‌ ನಲ್ಲಿ ಘಟನೆ ಇಂದು ಪ್ರತೀಭಟನೆಗೆ ಮುಂದಾಗಿದ್ದ ಸ್ಥಳೀಯರು ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಕಾಮಗಾರಿ ಮಾಡಲು ಹಿಂದೇಟು ಅರೋಪ ಮಲೆನಾಡು ತಾಲೂಕುಗಳಿಂದ ಮಂಗಳೂರು ಸಂಪರ್ಕಿಸುವ ರಸ್ತೆ ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ದ ಅಕ್ರೋಶ ಇದೆ ರೀತಿ ಕೆಲಸ  ವಿಳಂಬವಾದರೆ ಮುಂದಿನ ವಾರ ಸೋಮವಾರ ನಾವೆಲ್ಲ ರೋಡ್ ಬ್ಲಾಕ್ ಮಾಡ್ತೀವಿ ಎಂದು pwd ಇಂಜಿನಿಯರ್ ಸತೀಶ್ಅವರನ್ನು ಎಚ್ಚರಿಕೆಯನ್ನು ನೀಡಿದರು ಸಳೀಯರಾದ  ರವಿ ರೈ, ಮತ್ತು ಟಿಟ್ಟುಮೋನಿಸ್, ಅಶೋಕ್, ಆಟೋ ಚಾಲಕರದ ಸಂತೋಷ್, ರಘುವೀರ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳದ ಪಿಎಸ್ಐ ಹರ್ಷವರ್ಧನ್, ಹಾಗೂ ASI ಮೋಹನ್ ರಾಜಣ್ಣ ಕೂಡ ಆಗಮಿಸಿದ್ದರು,

ಗುಂಡಿ ಹೊಂಬಳ ಶಾಲೆ ಮತ್ತು ಕಡಬಗೆರೆ ಸರ್ಕಾರಿ ಶಾಲೆಯ ಮಕ್ಕಳಿಗೆ ದಾನಿಗಳಿಂದ ಕಿಟ್ಟ್ ವಿತರಣೆ

Image
 ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ   ಹೋಬಳಿ ಬಿದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಗುಂಡಿಹೊಂಬಳ ಶಾಲೆ ಮತ್ತು ದೇವದಾನ ಗ್ರಾಮ ಪಂಚಾಯಿತಿಯ ಹಳೆ ಕಡಬಗೆರೆ ಶಾಲೆಯ 46 ಮಕ್ಕಳಿಗೆ ಉಚಿತ ಪಠ್ಯೇತರ ಸಾಮಾಗ್ರಿಯನ್ನು ಗಂಧದ ಗುಡಿ ಬಳಗ ಜೆಪಿ ನಗರ ಬೆಂಗಳೂರು ಇವರು  ಬ್ಯಾಗ್ ಮತ್ತು ಪಠ್ಯಪುಸ್ತಕ, ಕವಿಗಳ ಪೋಟೋ, ಅಟೋಟ ಸಾಮಗ್ರಿ, ವಾಟರ್ ಫಿಲ್ಟರ್, ಮೆಡಿಕಲ್ ಕಿಟ್, ಚಾರ್ಟ್, ಶಾಲೆಗೆ ಸಣ್ಣ ಗ್ರಂಥಾಲಯ ಪುಸ್ತಕ, ವಿತರಣೆ ಮಾಡಿದರು. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದರಿಂದ ಹಾಗೂ ಖಾಸಗಿ ಶಾಲೆಗಳಿಗೆ ಸೇರಿಸಲು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು ಅದರಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಬುಡಕಟ್ಟು ಜನಾಂಗದ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅದರಲ್ಲಿ 2 ವರ್ಷದಿಂದ ಕೋರೋನಾ ಮಹಾಮಾರಿ ಗ್ರಾಮ ಭಾಗದ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ. ಅದನ್ನು ಮನಗಂಡು ನಮ್ಮ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ದಾನಿಗಳು ಮೂಲಭೂತ ಸೌಕರ್ಯ ವಂಚಿತ ಶಾಲೆಯ ಮಕ್ಕಳಿಗೆ ಉಚಿತ ಪಠ್ಯೇತರ ಸಾಮಾಗ್ರಿಯನ್ನು ನೀಡಲು ಮುಂದಾಗಿರುತ್ತಾರೆ.  ಹಾಗೂ ಗಂಧದ ಗುಡಿ ಬಳಗ ತಂಡದ ಜೊತೆ ಕೊಂಡಿಯಾಗಿ ಕೆಲಸ ಮಾಡಿದ ಮಂಜುನಾಥ್ ವಿ ಸಿ ಬಿದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್...

ಶ್ರೀಲಂಕಾ ದೇಶದಲ್ಲಿ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರಿಗೆ ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ

Image
  ಗದಗ.16/12/2021, ಶ್ರೀಲಂಕಾ ದೇಶದ ಕೊಲಂಬೊ ನಗರದ ಮೂವಿನೆಕ್ ಕಾನ್ಪರೆನ್ಸ ಹಾಲ್ ನಲ್ಲಿ ಇಂಟರ್ ನ್ಯಾಶನಲ್ ಕಲ್ಚರಲ್ ಪೆಸ್ಟ್ ಕೌನ್ಸಿಲ್  ಮತ್ತು ಗ್ಲೋಬಲ್ ಪೀಸ್ ಪೌಂಡಿಶನ್ ಸಮಿತಿ ವತಿಯಿಂದ ನಡೆದ 27ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಜನಪದ ಕೂಗು ಶಿಕ್ಷಣ ನೀಡುವದರೋಂದಿಗೆ ನಾಡು ನುಡಿಯ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾ  ತಮ್ಮ ಕೃಷಿಯ ಬದುಕಿನೊಂದಿಗೆ  ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಜನಪದ ಕಲಾವಿದ   ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ  ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ  ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ ಮಾಡಲಾಯಿತು. ಗಮನಸೆಳೆದ ಜನಪದ ಹಾಡುಗಳು..  ಶ್ರೀಲಂಕಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ  ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರು ಹಾಡಿದ  ಲಾವಣಿ,ರಂಗಗೀತೆ,  ಸುಗ್ಗಿ ಪದಗಳು,ಹಂತಿಪದಗಳು ಸೇರಿದಂತೆ ವಿವಿಧ ಪ್ರಕಾರದ ಜನಪದ ಗೀತೆಗಳು ಕೇಳಿಬಂದವಲ್ಲದೇ   ಕನ್ನಡದ ಸ್ವಾಭಿಮಾನದ ಗೀತೆಗಳು  ಎಲ್ಲರ ಗಮನಸೆಳೆದು ಕುಣಿಯುವಂತೆ ಮಾಡಿದವು . ಈ ಸಂದರ್ಭದಲ್ಲಿ  ಪರಮ ಪೂಜ್ಯ ಶ್ರೀ ಮಲಯ ಶಾಂತಮುನಿ ಶ್ರೀಗಳು  ಶಿವಗಂಗೆ,ಕ...

ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಗೆ ಜೀವತಾವಧಿ ಶಿಕ್ಷೆ

Image
  ಉಡುಪಿ: ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ಜೀವತಾವಧಿ ಶಿಕ್ಷೆ ಹಾಗೂ ರೂ. 20,000 ದಂಡ ವಿಧಿಸಿದ್ದಾರೆ. 2020ರ ಮೇನಲ್ಲಿ 41 ವರ್ಷದ ತಂದೆ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯ ತಾಯಿ ಹಾಗೂ ಸೋದರ ಮನೆಯಲ್ಲಿ ಇದ್ದ ಸಂದರ್ಭ ತಂದೆ ಪೈಶಾಚಿಕ ಕೃತ್ಯ ಎಸಗಿದ್ದ. ಬಳಿಕ ಎರಡನೇ ಬಾರಿಯೂ ಅತ್ಯಾಚಾರ ಎಸಗಿ, ವಿಷಯ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ. ಬಾಲಕಿಯು ಪಕ್ಕದ ಮನೆಯವರ ಸಹಕಾರದಿಂದ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು. ಬಳಿಕ, ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ ತಂದೆಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ 23 ಸಾಕ್ಷಿಗಳ ಪೈಕಿ 11 ಮಂದಿಯ ವಿಚಾರಣೆ ನಡೆದಿತ್ತು. ಸಂತ್ರಸ್ತ ಬಾಲಕಿ, ತಾಯಿ ಹಾಗೂ ನೆರೆಮನೆಯವರು ನುಡಿದ ಸಾಕ್ಷ್ಯ ಅಭಿಯೋಜನೆಗೆ ಪೂರಕವಾಗಿದ್ದರಿಂದ ಬಾಲಕಿಯ ತಂದೆಯನ್ನು ಅಪರಾಧಿ ಎಂದು ತೀರ್ಮಾನಿಸಿದ ನ್ಯಾಯಾಧೀಶರು ಜೀವಿತಾವಧಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಸರ್ಕಾರ ರೂ. 5 ಲಕ್ಷ ಪರಿಹಾರ ನೀಡಲೂ ಆದೇಶಿಸಿದ್ದಾರೆ.

ಸಾವನ್ನು ಸಂಭ್ರಮಿಸಿದ ಓರ್ವನ ಬಂಧನ,ಕರ್ನಾಟಕದಲ್ಲಿ,,,

Image
  ಬೆಂಗಳೂರು: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಅವ್ರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಟಿ.ಕೆ.ವಸಂತ್ ಕುಮಾರ್ (40) ನಗರದ ಖಾಸಗಿ ಲ್ಯಾಬ್ʼನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾನೆ. ಇನ್ನು ಈತನ ವಿರುದ್ಧ ಐಪಿಸಿ ಸೆಕ್ಷನ್ 505ರಡಿ ಎಫ್ ಐಆರ್ ದಾಖಲಿಸಲಾಗಿದೆ. ಮೈಸೂರು ಮೂಲದ ಆರೋಪಿ, ಬಿಪಿನ್ ರಾವತ್ ಅವ್ರ ಸಾವನ್ನ ಸಂಭ್ರಮಿಸಿ ಫೇಸ್ ಬುಕ್ʼನಲ್ಲಿ ಪೋಸ್ಟ್‌ ಹಾಕಿದ್ದ. ಈತ ‘ಬಿಪಿನ್ ರಾವತ್, ಮೋದಿ ಗುಲಾಮತನದ ಒಂದು ತಲೆಮಾರು’, ‘ಚೀನಾ ಭಾರತ ಗಡಿಯಲ್ಲಿ ಬಂದು ಹಳ್ಳಿಗಳನ್ನ‌ ನಿರ್ಮಿಸಿದಾಗ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ’, ರಾವತ್ ಸಾವಿನಿಂದ ದೇಶವಂತೂ ಪಾರಾಗಿದೆ ಎಂದು ಫೇಸ್​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದ. ಈ ಕುರಿತು ಒಂದು ಪ್ರಕರಣ ಮಂಗಳೂರಿನಲ್ಲಿ ದಾಖಲಾಗಿದ್ದು, ಸಧ್ಯ ಈ ಲ್ಯಾಬ್ ಟೆಕ್ನಿಷಿಯನ್ʼನನ್ನ ಪೊಲೀಸರು ಬಂಧಿಸಿದ್ದಾರೆ.

ಸಿ ಎನ್ ಜಿ, ಬಸ್ ಬಂತು ಉಪ್ಪಿನಂಗಡಿಯಿಂದ ಮಂಗಳೂರಿಗೆ,,

Image
  ಉಪ್ಪಿನಂಗಡಿ : ಪೆಟ್ರೋಲ್ - ಡೀಸೆಲ್‌ಗೆ ಪರ್ಯಾಯ ಇಂಧನವಾಗಿ ವಾಹನಗಳಿಗೆ ಸಿಎನ್‌ಜಿ ಬಳಕೆ ಮಾಡಲಾಗುತ್ತಿದ್ದು , ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್‌ಜಿ ಇಂಧನ ಬಳಕೆಯ ಬಸ್ ಶನಿವಾರ ರಸ್ತೆಗಿಳಿದಿದೆ . ಶನಿವಾರ ಉಪ್ಪಿನಂಗಡಿಯಿಂದ ಮಂಗಳೂರಿಗೆ ಈ ಹೊಸ ಬಸ್ ಓಡಾಟ ಆರಂಭಿಸಿದೆ . ಟಾಟಾ ಮೋಟಾರ್ಸ್ ಕಂಪೆನಿಯು ತಯಾರಿಸಿದ ಬಸ್ ಇದಾಗಿದೆ . ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್‌ಜಿ ಆಧಾರಿತ ಮೊದಲ ಬಸ್ ಇದು ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ . ಅಧಿಕ ಮೈಲೇಜ್ : ಕಂಪೆನಿಯವರ ಮಾಹಿತಿ ಪ್ರಕಾರ ಬಸ್ ಡೀಸೆಲ್‌ಗಿಂತ ಕೊಂಚ ಹೆಚ್ಚು ಮೈಲೇಜ್ ಕೊಡುತ್ತದೆ . ಆದರೆ ಓಡಾಟ ಈಗಷ್ಟೇ ಆರಂಭಗೊಂಡಿರುವುದರಿಂದ ಮೈಲೇಜ್‌ನ ನಿಖರತೆ ಸಿಕ್ಕಿಲ್ಲ ಎಂದು ಮಾಲಕರು ಹೇಳಿದ್ದಾರೆ . ನೋಂದಣಿ ಸೇರಿ ಈ ಬಸ್‌ಗೆ ಸುಮಾರು 30 ಲಕ್ಷ ರೂ . ತಗಲುತ್ತಿದ್ದು , ಡೀಸೆಲ್ ಬಸ್‌ಗಳಿಗಿಂತ 3.5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ ಎಂದಿದ್ದಾರೆ . ಮರುಪೂರಣ ಸವಾಲು : ಕಾರುಗಳಿಗೆ ಸಿಎನ್‌ಜಿ ಇಂಧನ ಬಳಕೆ ಮಾಡುವುದಾದರೆ ಇಂಧನ ತೀರಿದ ಬಳಿಕ ಪೆಟ್ರೋಲ್ ಮೂಲಕವೂ ಪ್ರಯಾಣ ಮುಂದುವರಿಸಬಹುದಾಗಿದೆ . ಆದರೆ ಸಿಎನ್‌ಜಿ ಬಸ್ಸಿನಲ್ಲಿ ಡೀಸೆಲ್ ಬಳಕೆಗೆ ಅವಕಾಶವಿಲ್ಲ . ಬಸ್ಸಿನ ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯ 80 ಕೆಜಿ . ಸದ್ಯ ಕೊಳ್ಳಾಡು , ಕಾವೂರು , ಹೊಸಬೆಟ್ಟುಗಳಲ್ಲಿ ಮಾತ್ರ ಸಿಎನ್‌ಜಿ ಮರು ಪೂರಣ ವ್ಯವಸ್ಥೆ ಇದೆ . ಈ ಬಸ್ಸಿನ ರೂಟ್ ಉಪ್ಪಿನಂಗಡಿ ಮಂಗಳೂರು ಆಗಿರುವ...

ಬಸ್ ನಲ್ಲಿದ್ದ ಸಹಪಾಠಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ, ಇಬ್ಬರ ಬಂಧನ,,

Image
  ಮಂಗಳೂರು (11-12-2021): ಉಡುಪಿ ಬಸ್ ನಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಸಹಪಾಠಿ ವಿದ್ಯಾರ್ಥಿಗಳ ಮೆಲೆ ಗೂಂಡಾಗಿರಿ ಕೇಸ್ ಗೆ ಸಂಬಂಧಿಸಿ ಇಬ್ಬರ ಮೆಲೆ ಸುಮೋಟೋ ಕೇಸ್ ದಾಖಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಇಬ್ಬರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ 153 ಎ ಮತ್ತು 354 ಅಡಿ ಕೇಸ್ ದಾಖಲಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಲಾಗಿದೆ. ಘಟನೆಯಲ್ಲಿ ಬಸ್ ಸಿಬ್ಬಂದಿಗಳ ಕೈವಾಡದ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಬಸ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಗೂಂಡಾಗಳು ವಿಡಿಯೋವನ್ನು ಹರಿಯಬಿಟ್ಟಿದ್ದರು.

ಸೇನಾ ಹೆಲಿಕಾಪ್ಟರ್ ಪತನ,ಮುಖ್ಯಸ್ಥ ಬಿ ಪಿ ಎನ್ ರಾವತ್ ಸೇರಿ 14 ಜನರಿದ್ದರು,

Image
  ಚೆನ್ನೈ : ಸೇನೆಯ ಹಿರಿಯ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ಎಂಐ -17 ವಿ 5 ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಹತ್ತಿರ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ . ಸೂಲೂರಿನ ಭಾರತೀಯ ವಾಯುಪಡೆ ನೆಲೆಯಿಂದ ಸೇನಾ ವಿಮಾನ ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಕಾಲೇಜು ಕಡೆಗೆ ಹೊರಟಿತ್ತು . ಹೆಲಿಕಾಪ್ಟರ್ ನಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ . ಅವರಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ , ಬ್ರಿಗೇಡಿಯರ್ ಎಲ್ಸ್ ಲಿಡರ್ , ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ , ನಾಯಕ್ ಗುರ್ಸೇವಕ್ ಸಿಂಗ್ , ನಾಯಕ್ ಜಿತೇಂದ್ರ ಕುಮಾರ್ , ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ , ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ . ತನಿಖೆಗೆ ಆದೇಶ : ತಮಿಳು ನಾಡಿನ ಕೂನೂರು ಬಳಿ ಎಂಐ -17 ವಿ 5 ಹೆಲಿಕಾಪ್ಟರ್ ಪತನಕ್ಕೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಭಾರತೀಯ ವಾಯುಪಡೆ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ , ಅವರ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ . ನಾಲ್ವರು ಸಾವಿಗೀಡಾಗಿರುವ ಶಂಕೆ : ನೀಲಗಿರಿ ಅರಣ್ಯ ಪ್ರದೇಶದಲ್ಲಿ ಪತನಕ್ಕೀಡಾದ ವೇಳೆ ಸ...

*ಯಥಾ ರಾಜ.ತಥಾ ಪ್ರಜಾ.ಅನ್ನೋ ಮಾತು ನೆನಪೂ ಆಗುತ್ತದೆ. ನಗುವೂ ಬರುತ್ತದೆ,,

Image
 ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಮತ್ತೆ ಪ್ರಶ್ನೆಗಳೇ  ಹುಟ್ಟಿಕೊಳ್ಳುತ್ತಿವೆ.... ಪ್ರತೀ ವರ್ಷವೂ ವೈರಸ್ ಹೊಸ ನಾಮಕರಣದೊಂದಿಗೆ ನವೆಂಬರ್, ಡಿಸೆಂಬರ್ ನಲ್ಲೇ ಬೀದಿಗೆ ಇಳಿಯುತ್ತೆ...  ಜನವರಿ, ಫೆಬ್ರವರಿ ಹೊತ್ತಿಗೆಲ್ಲ ತೀವ್ರತೆ ಕಂಡುಕೊಂಡು ಏಪ್ರಿಲ್, ಜೂನ್ ಹೊತ್ತಿಗೆ ಹಿಡಿತಕ್ಕೆ ಬರುತ್ತದೆ.... ಕಾಲಕಾಲಕ್ಕೆ ಸರಿಯಾಗಿ ಮಳೆಯೇ ಬಾರದಿರುವ ಈ ಕಾಲದಲ್ಲಿ ವೈರಸ್ ಮಾತ್ರ ಕಾಲಕ್ಕೆ ಸರಿಯಾಗಿ ಬರುತ್ತೆ.... ನಿಖರವಾದ ಉತ್ತರ ಯಾರಿಂದಲೂ ದೊರಕುತ್ತಿಲ್ಲ.... ಇನ್ನು  ಓಮಿಕ್ರಾನ್ ಎನ್ನುವ ಭಯವೊಂದು ಕಾಡುವ ಅಥವಾ ಕಾಡಿಸುವ ದಿನಗಳು..... ನಮ್ಮ ಮುಂದಿರುವಾಗ... ಆ ಭಯದ ವಿರುದ್ದವಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಭೆಗಳಲ್ಲಿ ಕಾಲಹರಣ ಮಾಡಿ ಹೊಸ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವುದು..... ಅದರ ಪಾಲನೆ ಮಾತ್ರ ಹೊರಡಿಸಿದವರಿಂದಲೇ ನಡೆಯದಿರುವುದು ವಿಪರ್ಯಾಸ..... ಇದರ ಬಗ್ಗೆ ಕೆಲವೊಂದು ಮಾಹಿತಿ ನಮ್ಮ ಸಮಾಧಾನಕ್ಕಾಗಿ.... ಓಮಿಕ್ರಾನ್ ಮಕ್ಕಳನ್ನು ಕಾಡುತ್ತದೆ ಎನ್ನುತ್ತಾರೆ... ಆದರೂ ಶಾಲೆಗಳಲ್ಲಿ ನಿಯಮ ಪಾಲನೆ ಆಗುತ್ತಿದೆಯೇ...... ಶಾಲೆಗಳು ಪರೀಕ್ಷೆಯ ವರೆಗೆ ಮುಂದುವರೆಯುತ್ತವೆ ಎನ್ನುವ ಭರವಸೆ ಇಲ್ಲದಿದ್ದರೂ ಶಾಲೆಗಳಲ್ಲಿ ವ್ಯಾಪಾರ ಭರದಿಂದ ಸಾಗಿವೆ.... ಇದರ ಬಗ್ಗೆ ಗಮನಹರಿಸಬೇಕಾದವರು ಜಾಣ ಕುರುಡು ಮೆರೆಯುತ್ತಿದ್ದಾರೆ....... ಇನ್ನು ಮಾಸ್ಕ್ ವಿಚಾರ ಹೇಳಲು ಘನಘೋರ...

ತಹಶೀಲ್ದಾರ್ ಅಂಬುಜಾ ಜೊತೆ ಮಾತುಕತೆ ನಡೆಸಿದ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷರು,

Image
 ವರದಿ:- ವೀರಮಣಿ  ಮಲೆನಾಡಿಗರ ಮುಖ್ಯ ಸಮಸ್ಯೆಯಾದ 94c ಹಾಗೂ ಈ ಸ್ವತ್ತಿನ ಕುರಿತಾಗಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಶೃಂಗೇರಿ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಅಂಬುಜಾ ಅವರೊಂದಿಗೆ ಮಲೆನಾಡು ಭಾಗದ ಸಮಸ್ಯೆಗಳ ಕುರಿತಾಗಿ ಸವಿಸ್ತಾರವಾಗಿ ಸುಧಾಕರ್ ಶೆಟ್ಟಿ ಅವರು ಚರ್ಚಿಸಿದ್ದಾರೆ. ಅತಿಶೀಘ್ರವಾಗಿ ಮಲೆನಾಡಿಗರ ಸಮಸ್ಯೆಗೆ ಪರಿಹಾರ ನೀಡಲೇಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿಸಿದ್ದಾರೆ. ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಮಲೆನಾಡು ಭಾಗವು ಎಲ್ಲರ ಕಣ್ಣಿಗೂ ಸ್ವಚ್ಛಂದವಾಗಿ ಬಹಳ ಸುಂದರವಾಗಿ ತೋರುತ್ತದೆ, ಆದರೆ ಇಲ್ಲಿನ ಮೂಲನಿವಾಸಿಗಳು ಎದುರಿಸುತ್ತಿರುವ ಸಂಕಷ್ಟ ಯಾರಿಂದಲೂ ಪರಿಹಾರ ವಾಗುತ್ತಿಲ್ಲ. ತಲೆದೋರಿರುವ 94c ಹಾಗೂ ಈ ಸ್ವತ್ತುಗಳ ಸಮಸ್ಯೆ ಅತಿ ಶೀಘ್ರವಾಗಿ ಪರಿಹಾರ ವಾಗಬೇಕೆಂದು ಮಾನ್ಯ ತಹಸೀಲ್ದಾರ್ ಅವರಲ್ಲಿ ಕೋರಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಶೃಂಗೇರಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಳಸಪ್ಪ ಗೌಡ, ಕಾರ್ಯದರ್ಶಿ ದಿನೇಶ್ ಹೆಗ್ಡೆ, ದೇವೇಂದ್ರ, ಉಪಸ್ಥಿತರಿದ್ದರು,

ವಿಮಾನದಲ್ಲಿ ಮಹಿಳೆಗೆ ಹೃದಯಾಘಾತ,ಕಣ್ಣೂರಿನಿಂದ ಶಾರ್ಜಕ್ಕೆ ಹೊರಟ ವಿಮಾನ,

Image
  ಮಂಗಳೂರು : ಕಣ್ಣೂರು ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಹೊರಟಿದ್ದ ವಿಮಾನದಲ್ಲಿ ಮಹಿಳೆಯೋರ್ವರಿಗೆ ಹೃದಯಾಘಾತ ವಾಗಿದ್ದು ಏರ್ ಇಂಡಿಯಾ ವಿಮಾನವನ್ನು ತುರ್ತಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾದೆ, ಕಣ್ಣೂರಿನಿಂದ ಶಾರ್ಜಾಕ್ಕೆ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಎದೆ ನೋವು ಮತ್ತು ಉಸಿರಾಟ ಸಮಸ್ಯೆ ಉಂಟಾಗಿದ್ದು , ಈ ವೇಳೆ ವಿಮಾನವನ್ನು ತುರ್ತಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿ , ನಂತರ ಮಾಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಬಳಿಕ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದು ,ಯಾವುದೇ ತೊಂದರೆ ಇಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ . ಮಹಿಳೆ ಮತ್ತು ಕುಟುಂಬ ಶಾರ್ಜಾಕ್ಕೆ ಹೋಗಲು ಅದೇ ದಿನ ರಾತ್ರಿ 11 ಕ್ಕೆ ಏರ್ ಪೋರ್ಟ್ ಅಧಿಕಾರಿಗಳು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ .

ಕವಿಶೈಲ ಮಲೆನಾಡು ಕ್ರಿಯೇಷನ್ ಯೂಟ್ಯೂಬ್ ವತಿಯಿಂದ ಸನ್ಮಾನ ಕಾರ್ಯಕ್ರಮ.

Image
ವರದಿ:- ವೀರಮಣಿ  -ಯೂಟ್ಯೂಬ್ ಚಾನಲ್ ನ ಸಾರಥಿ ಅಖಿಲೇಶ್ ನೇತೃತ್ವ  ಶಿವಮೊಗ್ಗ :ಕವಿಶೈಲ ಮಲೆನಾಡು ಕ್ರಿಯೇಶನ್ ಯೂಟ್ಯೂಬ್ ಚಾನೆಲ್ ವತಿಯಿಂದ ಭಾನುವಾರ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ, ಕೊಪ್ಪದಲ್ಲಿ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಗೀತಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಸೇನಾ ದಳಕ್ಕೆ ಆಯ್ಕೆಗೊಂಡಿರುವ ನಿತಿನ್ ಮತ್ತು ಸಂಗೀತ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಯನ್ನು ಇಡುತ್ತಿರುವ ನಿಕ್ಷೀಪ್ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಸಂಗೀತ ಶಿಕ್ಷಕರಾದ ಬಸವರಾಜ್ ಬಾರ್ಕೇರ್, ಕವಿಶೈಲ ಮಲೆನಾಡು ಕ್ರಿಯೇಶನ್ ಚಾನೆಲ್ ನ  ಸಾರಥಿ ಅಖಿಲೇಶ್ ಎಂ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಬಾಳೆಹೊನ್ನೂರು, ಶಾಲೆಯ 40 ವಿದ್ಯಾರ್ಥಿಗಳಿಗೆ ಕರೋನ ದೃಢ,

Image
  ವರದಿ:- ವೀರಮಣಿ , ಚಿಕ್ಕಮಗಳೂರು : ರಾಜ್ಯದಲ್ಲಿ  ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬಾಳೆಹೊನ್ನೂರಿನ ಜವಾಹರ್ ನವೋದಯ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.

S EX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್

Image
  ನವದೆಹಲಿ: ದ್ವಿ ಚಕ್ರ ವಾಹನದ ನಂಬರ್ ಪ್ಲೇಟ್ ನಲ್ಲಿ SEX ಎಂದು ಬರೆದಿರುವುದು ಯುವತಿಗೆ ಮುಜುಗರ ಉಂಟು ಮಾಡಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇದೀಗ ದೆಹಲಿ ಮಹಿಳಾ ಆಯೋಗವು ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದೆ. SEX ಎಂಬ ನೋಂದಣಿ ಸಂಖ್ಯೆಯನ್ನು ಬದಲಿಸುವಂತೆ ಕೋರಿರುವ  ದೆಹಲಿ ಮಹಿಳಾ ಆಯೋಗ ಈ ಸರಣಿಯಲ್ಲಿ ನೋಂದಣಿಯಾಗಿರುವ ಒಟ್ಟು ವಾಹನ ಸಂಖ್ಯೆಯನ್ನು ಸಲ್ಲಿಸುವಂತೆ ತಿಳಿಸಿದೆ. ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಇಲಾಖೆಯಿಂದ ಬಂದಿರುವ  ದೂರುಗಳ ವಿವರವನ್ನು ಕೇಳಿದ್ದು, ಈ ಬಗ್ಗೆ 4 ದಿನಗಳೊಳಗೆ ವಿವರವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದೆ. ದೆಹಲಿಯಲ್ಲಿ ದ್ವಿಚಕ್ರ ವಾಹನಗಳೀಗೆ ಎಸ್ ಇಂಗ್ಲಿಷ್ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ಕಾರಿಗೆ ‘ಸಿ’ ಹಾಗೂ ಬೈಕ್ ಗೆ ‘ಎಸ್’ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್ ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್ ಇ ಎಕ್ಸ್(SEX) ಎಂಬ ನಂಬರ್  ನೀಡಲಾಗುತ್ತಿದೆ. ಇದರಿಂದಾಗಿ ಸೀಮಿತ ಮನಸ್ಥಿತಿಯ ಜನರ ನಡುವೆ ಈ ನಂಬರ್ ಪಡೆದ ಮಹಿಳೆಯರು ಮುಜುಗರಕ್ಕೀಡಾಗುವ ಸನ್ನಿವೇಶಗಳು ಸೃಷ್ಟಿಯಾಗಿವೆ.

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ,ಮೂವರು ಮಕ್ಕಳು ಸಹಿತ ಕೇರಳದ ಒಂದೇ ಕುಟುಂಬದ ಐವರು ಮೃತ್ಯು,

Image
  ಸೌದಿ ಅರೇಬಿಯಾದ ಬಿಶಾ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು onmanorama.com ವರದಿ ಮಾಡಿದೆ . ಮೃತರನ್ನು ಮುಹಮ್ಮದ್ ಜಾಬೀರ್ ( 48 ) , ಅವರ ಪತ್ನಿ ಶಬ್ಬಾ ( 36 ) ಮತ್ತು ಮಕ್ಕಳಾದ ಸೈಬಾ ( 7 ) , ಸಹಾ ( 5 ) ಮತ್ತು ಲುಚ್ಛಿ ಎಂದು ಗುರುತಿಸಲಾಗಿದೆ . ಶುಕ್ರವಾರ ರಾತ್ರಿ ಕುಟುಂಬ ಸಮೇತರಾಗಿ ಜುಬೈಲ್‌ನಿಂದ ಜಿಝಾನ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ . ಮಾರ್ಗಮಧ್ಯೆ ಅವರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ, ಜಾಬೀರ್ ಮತ್ತು ಕುಟುಂಬ ಕೇರಳದ ಕೋಝಿಕ್ಕೋಡ್ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ .

ಸಿಲಿಕಾನ್ ಸಿಟಿಯಲ್ಲಿ, ಓಮಿಕ್ರಾನ್ ವೈರಸ್,ಸೋಂಕಿತರ ಸಂಖ್ಯೆ ಐದು.!

Image
ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಎರಡಲ್ಲ ಐದು ಜನಕ್ಕೆ ಹರಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ವೈರಸ್ ಸೋಂಕಿತ ಐದು ಪ್ರಕರಣಗಳು ದಾಖಲಾಗಿವೆ ಎಂದು ಗೌರವ್ ಗುಪ್ತ ಸ್ಪೋಟಕ ಮಾಹಿತಿ ನೀಡಿದ್ದಾರೆ.  ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 46 ವರ್ಷದ ವ್ಯಕ್ತಿಯಲ್ಲಿ ಮತ್ತು 66 ವರ್ಷದ ವೃದ್ಧನಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, “ರಾಜ್ಯದಲ್ಲಿ ಐದು ಜನರಿಗೆ ಓಮಿಕ್ರಾನ್ ವೈರಸ್ ತಗುಲಿರುವುದು ದೃಢಪಟ್ಟಿದೆ. 46 ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ಮೂರು ದಿನ ಮಾತ್ರ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಇವರ ಕಂಪನಿ ಬೋರ್ಡ್ ಮೀಟಿಂಗ್‌ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋ...

11,ಜೋಡಿ ಅವಳಿ ವಿದ್ಯಾರ್ಥಿಗಳು,ಶಾಲೆ ಕೈರಂಗಳ,

Image
  ಮಂಗಳೂರು: ಹೊರವಲಯದಲ್ಲಿರುವ ಕೈರಂಗಳದಲ್ಲಿರುವ ಪುಣ್ಯಕೋಟಿ ನಗರದಲ್ಲಿನ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ 11 ಜೋಡಿ ಅವಳಿ ಮಕ್ಕಳಿದ್ದು, ಗಮನ ಸೆಳೆಯುತ್ತಿದ್ದಾರೆ. 4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಹಾಗೂ 6,7,8 ಮತ್ತು 10 ನೇ ತರಗತಿಯಲ್ಲಿ ತಲಾ 1 ಹಾಗೂ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ ಎನ್ನಲಾಗಿದೆ. ಶಾಲೆಯ‌ 4ನೇ ತರಗತಿಯಲ್ಲಿ ಜ್ಞಾನೇಶ್- ಜಯೇಶ್, ಸಂಜನ- ಸಂಜಯ, ಲತೇಶ್- ಲವೇಶ್, 5ನೇ ತರಗತಿಯಲ್ಲಿ ಧನ್ಯಶ್ರೀ- ಧನುಷ್, ಚೈತ್ರ- ಚಂದನ, 6ನೇ ತರಗತಿಯಲ್ಲಿ ಭವ್ಯಶ್ರೀ- ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ- ಕೀರ್ತನಾ, 8ನೇ ತರಗತಿಯಲ್ಲಿ ಸುಜನ- ಸುಹನ, 10ನೇ ತರಗತಿಯಲ್ಲಿ ಶ್ರೀನಾಥ್- ಸುಶಾಂತ್, ದ್ವಿತೀಯ ಪಿಯುಸಿಯಲ್ಲಿ ಪ್ರೇಕ್ಷ - ಪ್ರಜ್ಞ, ಮೋಕ್ಷ- ಮೋಕ್ಷಿತ ಎಂಬ ವಿದ್ಯಾರ್ಥಿ ಅವಳಿಗಳಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ.