ನರಸಿಂಹರಾಜಪುರ, ನಿಯಂತ್ರಣ ತಪ್ಪಿದ ಬೈಕ್,ಸ್ಥಳದಲ್ಲೇ ಅಸುನೀಗಿದ ಸವಾರ
ನಿಯಂತ್ರಣ ತಪ್ಪಿದ ಬೈಕ್,ಸ್ಥಳದಲ್ಲೇ ಅಸುನೀಗಿದ ಸವಾರ ನರಸಿಂಹರಾಜಪುರ:- ತಾಲೂಕಿನ ಅಳೆಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದ್ದು ಬೈಕ್ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ . ಮೃತ ದುರ್ದೈವಿಯನ್ನು ಕಳಸದ ಬಾಳೆಹೊಳೆ ಮೂಲದ ವಿಶ್ವನಾಥ್ ಹೊಳ್ಳ ( 55 ) ಎಂದು ಗುರುತಿಸಲಾಗಿದೆ. ಶಿವಮೊಗ್ಗದಿಂದ ಬಾಳೆಹೊಳೆ ಕಡೆಗೆ ತೆರಳುವಾಗ ಬೈಕ್ ನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ . ಘಟನಾ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . 🖊️ ವೀರಮಣಿ,