Posts

Showing posts from July, 2024

ಶೃಂಗೇರಿ, ಅಪಾಯದ ಅಂಚಿನಲ್ಲಿ ಹಜರತ್ ಜಹೂರ್ ಮೆಹಮೂದ್ ಷಾಹ್ ದರ್ಗಾ,

Image
ಶೃಂಗೇರಿ, ಅಪಾಯದ ಅಂಚಿನಲ್ಲಿ ಹಜರತ್ ಜಹೂರ್ ಮೆಹಮೂದ್ ಷಾಹ್ ದರ್ಗಾ,    ಶೃಂಗೇರಿ:- ಪಟ್ಟಣದ ಮದ್ಯ ಭಾಗದಲ್ಲಿರುವ ಮುಸ್ಲಿಮರ ಪವಿತ್ರ ಸ್ಥಳವಾದ ಪುರಾತನ ಪವಾಡತೆ ದೈವಶಕ್ತಿ ಹಾಗೂ ಭಾವೈಕ್ಯತೆ ಯ ನಂಬಿಕೆಗೆ ಒಳಗೊಂಡ ದರ್ಗಾ ಶರೀಫ್, ಪ್ರತೀವರ್ಷವು ಕೂಡ ಇಲ್ಲಿ ಜಾತಿ ಭೇದ ಭಾವವಿಲ್ಲದೆ ಊರೂಸ್ ಇನ್ನಿತರ ಕಾರ್ಯಕ್ರಮ ಗಳು ಎಲ್ಲರೂ ಒಟ್ಟಾಗಿ ಸೇರಿ ನಡೆಸುಕೊಂಡು ಬರುತ್ತಾರೆ ಆದರೆ ಎಲ್ಲರಿಗೂ ತಿಳಿದ ಹಾಗೆ ಇದು ಶೃಂಗೇರಿ ತಾಲ್ಲೂಕು ಆಫೀಸ್ ಮುಂಭಾಗದ ಬೆಟ್ಟದ ಮೇಲಿದ್ದು ಇದರ ಅಡಿ ಭಾಗ ಸುತ್ತಲೂ ಮಣ್ಣಿನ ಧರೆಯಿಂದ ಆಗಿದ್ದು ಇದರ ಕೇಳಭಾಗದ ಮಣ್ಣು ಪ್ರತಿವರ್ಷ ಸ್ವಲ್ಪ ಸ್ವಲ್ಪನೇ ಜರಿದು ಜರಿದು ಈಗ ದರ್ಗಾದ ಬುಡಕ್ಕೆ ಬಂದು ನಿಂತಿದ್ದು ಕೇಳಭಾಗದಲ್ಲಿ ಯಾವುದೇ ರೀತಿಯಲ್ಲಿ ಆಧಾರ ಇಲ್ಲ, ದರ್ಗಾದ ಕೆಳಬಾಗದಲ್ಲಿ ಮುಖ್ಯ ರಸ್ತೆ ಭಾರತಿಬೀದಿ,ಮನೆ,ಹಾಗೂ ಅಂಗಡಿಗಳ ಕೂಡ ಅನಾಹುತಕ್ಕೆ ಒಳಪಡುವ ಸಂಭವ ಇರುವ ಕಾರಣ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು, ಇದರ ಬಗ್ಗೆ ಆದಷ್ಟು ಬೇಗ ಗಮನ ವಹಿಸಿ ಸೂಕ್ತ ಕ್ರಮ ಕ್ಕೆ ಆಗ್ರಹಿಸ ಬೇಕೆಂದು ಶೃಂಗೇರಿ ಮುಸ್ಲಿಂ ಬಾಂಧವರು ಆಗ್ರಹಿಸಿದ್ದಾರೆ.. 🖋 ಶಬ್ಬೀರ್ ಅಹ್ಮದ್ hh ಪುರ 
Image
 ಕೊಪ್ಪ:- ತಾಲ್ಲೂಕಿನ ಕಾಚ್ಗಲ್ ಹೋಗುವ ದಾರಿಯಲ್ಲಿ ಗಬ್ಬಾನೆ ಭೂತರಾಯ ದೇವಸ್ಥಾನ ಸಮೀಪ ಇದಾಗಿದ್ದು ಬಹಳ ಹಳೆಯದಾದ ಹಾಗೂ ಬಹಳ ಇಕ್ಕಟ್ಟಾದ ಸೇತುವೆ ಯಿಂದಯಾವುದೇ ರೀತಿಯಲ್ಲಿ ಓಡಾಡುವ ಗ್ರಾಮಸ್ಥರಿಗಾಗಲಿ,ಜಾನುವಾರು ಅಥವಾ ದೇವಸ್ಥಾನ ಕ್ಕೆ ಓಡಾಡುವ ಭಕ್ತರಿಗಾಗಲಿ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲವಾಗಿದ್ದು, ನೀರಿನ ರಭಸ ದಿನೇ ದಿನೇ ಹೆಚ್ಚಾಗುತ್ತಿದ್ದು ಸೇತುವೆ ಸಮೇತ ಕೊಚ್ಚಿ ಕೊಂಡು ಹೋಗುವ ಸಂದರ್ಭ ಉಂಟಾಗಿದ್ದು ಗ್ರಾಮಸ್ಥರು ಭಯದಿಂದ ಓಡಾಡುವ ಪರಿಸ್ಥಿತಿ ಉಂಟಾಗಿದೆ, ಮೆಕ್ಕಾದ ಗಡಿಯಾರಕ್ಕೆ ಯಾಕೆ ಸಿಡಿಲು,? ಕ್ಲಿಕ್ ಮಾಡಿ  ಅಲ್ಲದೆ ಈಸೇತುವೆಗೆ ಯಾವುದೇ ರೀತಿಯ ಕೈಪಿಡಿಯು ಇಲ್ಲವಾಗಿದೆ, ಈ ವಿಷಯ ಈ ಮೊದಲು ಗ್ರಾಮದ ಸಂಭದಪಟ್ಟ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ತಂದರು ನಿರ್ಲಕ್ಷ ಮಾಡಿದ್ದಾರೆ ವಿನಃ ಯಾವುದೇ ಕೂಡ ಪ್ರಯೋಜನ ವಾಗಿಲ್ಲ,ಎಂದು ಗ್ರಾಮಸ್ಥರು ತೀವ್ರ ವಾಗಿ ಆರೋಪಿಸಿದ್ದಾರೆ. ಈಗಲಾದರೂ ಸಂಭಂದ ಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ವಹಿಸಿ ಆಗಬಹುದಾದ ಅನಾಹುತ ಸಂಭವಿಸುವ ಮುಂಚೆ ಕ್ರಮವಹಿಸಬೇಕಾಗಿದೆ, 🖋ಶಬ್ಬೀರ್ ಅಹ್ಮದ್ hh ಪುರ

ಮಕ್ಕಾದ ಗಡಿಯಾರ ಗೋಪುರಕ್ಕೆ ಮಾತ್ರ ಮಿಂಚು ಏಕೆ ಬಡಿಯುತ್ತದೆ ?

Image
  ಮಕ್ಕಾದ ಗಡಿಯಾರ ಗೋಪುರಕ್ಕೆ ಮಾತ್ರ ಮಿಂಚು ಏಕೆ ಬಡಿಯುತ್ತದೆ ? ಭಾರೀ ಮಳೆ ಮತ್ತು ಗುಡುಗು ಸಹಿತ ಪ್ರತಿ ಬಾರಿಯೂ, ಮಕ್ಕಾದ ಗಡಿಯಾರ ಗೋಪುರದ ಅರ್ಧಚಂದ್ರಾಕಾರದ ಮೇಲೆ ಸಿಡಿಲು ಬಡಿದ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಮಕ್ಕಾದ ಗಡಿಯಾರ ಗೋಪುರಕ್ಕೆ ಮಾತ್ರ ಏಕೆ ಸಿಡಿಲು ಬಡಿಯುತ್ತದೆ ಎಂದು ಯೋಚಿಸಿದ್ದೀರಾ,? ವಾಸ್ತವವಾಗಿ, ಮಿಂಚು ಗಡಿಯಾರ ಗೋಪುರದ ಮೇಲಿರುವ ಅರ್ಧಚಂದ್ರನನ್ನು ಮಾತ್ರ ಹೊಡೆಯುತ್ತದೆ ಏಕೆಂದರೆ ಮಕ್ಕಾ ಗಡಿಯಾರವು 20 ಸ್ವಯಂಚಾಲಿತವಾಗಿ ವಿಸ್ತರಿಸುವ ಮಿಂಚಿನ ವಾಹಕಗಳನ್ನು ಮತ್ತು 800 ಸ್ಥಿರರಾಡ್‌ಗಳನ್ನು ಹೊಂದಿದ್ದು, ಗಡಿಯಾರ ಮತ್ತು ದೀಪಗಳನ್ನು ಮಿಂಚಿನಿಂದ ರಕ್ಷಿಸುತ್ತದೆ. ರಾಡ್‌ಗಳು ಗಡಿಯಾರ ಗೋಪುರದ ಅತ್ಯುನ್ನತ ಬಿಂದುವಿನ ಮೇಲೆ ಅಂಟಿಕೊಳ್ಳುತ್ತವೆ ಮತ್ತು ಮಿಂಚಿನ ಬೋಲ್ಟ್ ಅನ್ನು ಆಕರ್ಷಿಸುತ್ತವೆ. ಒಮ್ಮೆ ಬೋಲ್ಟ್ ಹೊಡೆದಾಗ, ರಾಡ್ ತಾಮ್ರ ಅಥವಾ ಅಲ್ಯೂಮಿನಿಯಂ ಕೇಬಲ್‌ಗಳ ಮೂಲಕ ಲಕ್ಷಾಂತರ ವೋಲ್ಟ್‌ಗಳ ಶಕ್ತಿಯನ್ನು ನೆಲಕ್ಕೆ ಸುರಕ್ಷಿತವಾಗಿ ಚಾನೆಲ್ ಮಾಡುತ್ತದೆ, ಇದರಿಂದಾಗಿ ಗೋಪುರವನ್ನು ಬೃಹತ್ ಶಕ್ತಿಯ ಉಲ್ಬಣದಿಂದ ರಕ್ಷಿಸುತ್ತದೆ. https://varthasarathi.blogspot.com/2024/07/blog-post_9.html ಆದ್ದರಿಂದ, ಸರಳವಾದ ಉತ್ತರವೆಂದರೆ ಮಿಂಚು ಮಕ್ಕಾದಲ್ಲಿನ ಗಡಿಯಾರ ಗೋಪುರವನ್ನು ಮಾತ್ರ ಹೊಡೆಯುತ್ತದೆ ಏಕೆಂದರೆ ಅದು ಮಿಂಚನ್ನು ಹೊಡೆಯಲು ಆಕರ್ಷಕಸಿಸುತ್ತದೆ ಎಂದ...
Image
  ಕೊಪ್ಪ:- ತಾಲ್ಲೂಕಿನ ಹರಿಹರಪುರ ಶೃಂಗೇರಿ ರಸ್ತೆ ಯಲ್ಲಿ ಧರ್ಮಸ್ಥಳ ಸಂಘದ ಕಚೇರಿ ಇದ್ದು  ಎಲ್ಲಾ ಸಂಘದ ಸದಸ್ಯರು ಗಳು ವಾರದ ಲೆಕ್ಕಾಚಾರವನ್ನು ನೀಡಲು ಸಂಘದ ಪುಸ್ತಕ ಸಮೇತವಾಗಿ ಪ್ರತಿ ಗುರುವಾರ ಬೆಳಗ್ಗೆ 6:30ಕ್ಕೆ  ಬೀಗ ತೊರೆಯುವ ಧರ್ಮಸ್ಥಳ ಸಂಘದ ನಿಯಮವಾಗಿರುತ್ತದೆ.ಆದರೆ ಕಛೇರಿಯ ಬಾಗಿಲು ತೆರೆಯುವುದು  ಗುರುವಾರ ಬೆಳಿಗ್ಗೆ 6:50 ರಿಂದ 7:00 ಗಂಟೆ ಆಗುತ್ತದೆ.ಆದರೆ ಸಂಘದ ಎಲ್ಲ ಸದಸ್ಯರುಗಳು ಚಳಿ ಮಳೆ ಅನ್ನದೆ,ಗೃಹಿಣಿಯರು ಕೆಲಸಕ್ಕೆ ಹೋಗುವವರು,ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ತಾಯಂದಿರು ಬೆಳಿಗ್ಗೆ ಬೇಗ ಬರುತ್ತಾರೆ, ಮನೆಕೆಲಸ ಅಥವಾ ಕೆಲಸಕ್ಕೆ ಹೋಗುವವರು ಎರಡು ನಿಮಿಷದ ಕೆಲಸ ಎಂದು ಕಚೇರಿ ತೆರೆಯುವ ಅರ್ಧ ಘಂಟೆ ಮುಂಚಿತವಾಗಿ ಕ್ಯೂ ನಲ್ಲಿ ನಿಂತಿರುತ್ತಾರೆ.ಅಲ್ಲಿಗೆ ಹಣಕಟ್ಟಲು ಬಂದ ಸಂಘದ ಸದಸ್ಯಸರು ಬರೋಬ್ಬರಿ 1ಗಂಟೆ ಕಾಯಬೇಕಾಗುತ್ತದೆ,ಇದು ಒಂದು ದಿನದ ವಿಷಯವಲ್ಲ,ಒಬ್ಬರ ಸಮಸ್ಯೆ ಅಲ್ಲಾ,ಪ್ರತಿ ಗುರುವಾರ ಹಾಗೂ ಪ್ರತಿಯೊಬ್ಬರ ಸಮಸ್ಯೆ,ಇದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹಲವಾರು ಕಾರಣ ಗಳನ್ನು ಹೇಳಿ ಆಯ್ತು ಎಂದು ಸಂಘದ ಸದಸ್ಯರಿಂದಆರೋಪ ಕೇಳಿ ಬರುತ್ತಿದೆ, https://youtu.be/w2EoCokdvN0 ಆದ್ದರಿಂದ ಆದಷ್ಟು ಬೇಗ ಧರ್ಮಸ್ಥಳ ಸಂಘದ ಉಸ್ತುವಾರಿಗಳು ಸಂಬಂಧ ಪಟ್ಟ ಮೇಲ್ವಿಚಾರರು ಅಥವಾ ಅಧಿಕಾರಿ ಗಳು ವಿಚಾರಣೆ ಮಾಡಿ ಇದನ್ನು ಸರಿಪಡಿಸಬೇಕಾಗಿದೆ ಎಂದು ಸಂಘದ ಸದಸ್ಯರ ಅಭಿಪ್ರಾಯ, ...

ಕೊಪ್ಪ ಮೂಲದ ಸೌಮ್ಯ ಎಂಬ ಯುವತಿ ಪ್ರೀತಿಯ ಬಲೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಶವವಾಗಿ ಪತ್ತೆ,

Image
  ಕೊಪ್ಪ ಮೂಲದ ಸೌಮ್ಯ ಎಂಬ ಯುವತಿ ಪ್ರೀತಿಯ ಬಲೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಶವವಾಗಿ ಪತ್ತೆ, ಕೊಪ್ಪ:- ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಸಾಗರ ಮೂಲದ ಆರೋಪಿ ಸೃಜನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್ ನನ್ನು ಪೀಡಿಸುತ್ತಿದ್ದಳು ಎನ್ನಲಾಗಿದೆ. ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದ ವಿಚಾರ ಬೆಳಕಿಗೆ ಬಂದಿದೆ. https://varthasarathi.blogspot.com/2024/07/u-e-57.html  ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ಸೌಮ್ಯಾಳ ಪರಿಚಯವಾಗಿತ್ತು ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿತು, ವರದಿ, ಮಜೀದ್ ಸಣ್ಣಕರೆ,

57 ಬಾಂಗ್ಲಾದೇಶೀಯರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿದ U A E,

Image
  U A E, ಗಲಭೆಯಲ್ಲಿ 57 ಬಾಂಗ್ಲಾದೇಶೀಯರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ಇಲ್ಲಿನ ಅರಬ್ ಪತ್ರಿಕೆ ವರದಿ ಮಾಡಿದೆ, ಅಬುಧಾಬಿ: ದೇಶದಾದ್ಯಂತ ಹಲವು ಬೀದಿಗಳಲ್ಲಿ ಶುಕ್ರವಾರ ಗಲಭೆಗಳನ್ನು ಪ್ರಚೋದಿಸಿದ್ದಕ್ಕಾಗಿ U A E ಯಲ್ಲಿ 57 ಬಾಂಗ್ಲಾದೇಶೀಯರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದೆ, ಇದರಲ್ಲಿ ಮೂರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ WAM ವರದಿ ಮಾಡಿದೆ. ಅಬುಧಾಬಿ ಫೆಡರಲ್ ಮೇಲ್ಮನವಿ ನ್ಯಾಯಾಲಯವು ತಮ್ಮ  ಸರ್ಕಾರದ ಮೇಲೆ ಒತ್ತಡ ಹೇರಲು ಪ್ರದರ್ಶನಗಳಿಗೆ ಕರೆ ನೀಡಿದ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಉಳಿದ 53 ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ ಮತ್ತು ಗಲಭೆಯಲ್ಲಿ ಭಾಗವಹಿಸಿದ ಒಬ್ಬರಿಗೆ 11 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಬಾಂಗ್ಲಾದೇಶದ ಪ್ರಜೆಗಳನ್ನು ಶಿಕ್ಷೆಯ ನಂತರ ಗಡೀಪಾರು ಮಾಡಲಾಗುವುದು ಎಂದು WAM ವರದಿ ಮಾಡಿದೆ. ಶುಕ್ರವಾರ,U A E ಅಟಾರ್ನಿ-ಜನರಲ್ ಹಮದ್ ಸೈಫ್ ಅಲ್-ಶಮ್ಸಿ ಅವರು ತಮ್ಮ ತಾಯ್ನಾಡಿನ ವಿರುದ್ಧ ಗಲಭೆಗಳನ್ನು ಪ್ರಚೋದಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಹಲವಾರು ಬಾಂಗ್ಲಾದೇಶಿ ಪ್ರಜೆಗಳ ಬಂಧನಕ್ಕೆ ತನಿಖೆಗೆ ಆದೇಶಿಸಿದ್ದಾರೆ, https://varthasarathi.blogspot.com/2024/07/blog-post_9.html   ವಿವಾದಾತ್ಮಕ ಉದ್ಯೋಗ ಕೋಟಾ ಯೋಜನೆಗೆ ಸಂಬಂಧಿಸಿದಂತೆ ಹಿಂಸಾತ್ಮಕ ವಿದ್ಯಾರ್...

ಕೊಪ್ಪ,ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ,

Image
  ಕೊಪ್ಪ:-ಮಲ್ನಾಡ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಕೊಪ್ಪ ತಾಲ್ಲೂಕಿನ ಶಾಂತಿಪುರದಲ್ಲಿ ದಿನಾಂಕ 21 ಜುಲೈ 2024ರ ಭಾನುವಾರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ, ಪ್ರಥಮ ಬಹುಮಾನವಾಗಿ ಹತ್ತು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ಆರು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು, ಮಹಿಳೆಯರು ಮತ್ತು ಮಕ್ಕಳಿಗೆ ಕೆಸರುಗದ್ದೆ ಓಟ ಹಾಗೂ ಪುರುಷರಿಗೆ ಕೆಸರುಗದ್ದೆ ಓಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು, ಹೆಚ್ಚಿನ ಮಾಹಿತಿಗಾಗಿ: 9900890376, 9686409762, 8971030836 🖋 ಮಜೀದ್ ಸಣ್ಣಕೇರೆ
Image
  ಚಿಕ್ಕಮಗಳೂರು:-ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕಶಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿಳಗಲಿ ಗ್ರಾಮದಲ್ಲಿ ಸುಮಾರು 15 ರಿಂದ 20 ಮನೆಗಳಿವೆ. ಎಲ್ಲಾ ಮನೆಗಳು ಕೂಡ ಅಪಾಯದಲ್ಲಿದೆ, ದಿನದಿಂದ ದಿನಕ್ಕೆ ಜರಿತ ಇರುವ ಧರೆಗಳು ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲ,  ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಮನೆ ಮೇಲೆ ದೊಡ್ಡ ಗಾತ್ರದ ಕಲ್ಲುಗಳು ಬಂದು ಬಿದ್ದಿರುವ ಘಟನೆ ಬಿಳಗಲಿ ಗ್ರಾಮದಲ್ಲಿ ನಡೆದಿದೆ, 2019ರಲ್ಲಿ ಭೂಕುಸಿತ ಉಂಟಾಗಿ ಮೂರು ಮನೆಗಳು ಕೊಚ್ಚಿ ಹೋಗಿ ಆ ಮೂರು ಮನೆಯ ಕುಟುಂಬಸ್ಥರಿಗೆ ಸರ್ಕಾರದ ಅನುದಾನದಲ್ಲಿ ಮೂರು ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು. ಉಳಿದ ಮನೆಗಳಿಗೆ ಯಾವ ಅನುದಾನವೂ ಕೂಡ ಇಲ್ಲ,  ಗ್ರಾಮದ ಜನರಿಗೆ ಕುಡಿಯುವುದಕ್ಕೆ ನೀರು ಇಲ್ಲದೆ, ಹೆಸರಿಗೆ ಮಾತ್ರ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಟ್ಯಾಂಕಿಯಿಂದ ಪೈಪ್ ಲೈನ್ ಮಾಡಿ ಅದಕ್ಕೆ ತಕ್ಕಂತೆ ಮೀಟರ್ ಗಳನ್ನು ಅಳವಡಿಸಿ ಹೋದ ಗ್ರಾಮಪಂಚಾಯಿತಿಯವರು ಇತ್ತ ಕಡೆ ಗಮನ ಹರಿಸಲೇ ಇಲ್ಲ,  ಒಂದು ಕಡೆನೀರು ಇಲ್ಲ ಇನ್ನೊಂದು ಕಡೆ ರಸ್ತೆ ಕೂಡ ಸರಿಇಲ್ಲ, ಈ ಗ್ರಾಮಕ್ಕೆ ಆಟೋ ಜೀಪ್ ಕೂಡ ಬರೋದಕ್ಕೆ ಆಗೋದೇ ಇಲ್ಲ ನಾವು ಸುಮಾರು ಎರಡು ಕಿಲೋಮೀಟರ್ ದೂರಕ್ಕೆ ನಡೆದುಕೊಂಡು ಹೋಗಬೇಕು ನಮ್ಮ ಗ್ರಾಮಕ್ಕೆ ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲಿ, ಬರುವುದಕ್ಕೆ ಹಿಂದೇಟು ಹಾಕ...
Image
  ಚಿಕ್ಕಮಗಳೂರು:- ಜಿಲ್ಲೆಯ ಮೂಡಗೆರೆ ತಾಲೂಕಿನ ನೀಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲಕ್ಷ್ಮಿ ಸಂತೋಷ್ ರವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿದ್ದು, ನಿಡುವಳೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್ ಭಗತ್ ಸಿಂಗ್ ನಗರ ದಲ್ಲಿ ಆದ ಘಟನೆ ಇದು ಸರಿಸುಮಾರು ನಿನ್ನೆ ರಾತ್ರಿ ಹತ್ತು ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ  ಪಕ್ಕದಲ್ಲಿರುವ ನಿಡುವಳೆ ಕಲ್ಮನೆ ಸ್ಟೇಟ್ ಪಕ್ಕದಲ್ಲಿರುವ ಮನೆ ಇದಾಗಿದ್ದು ಎಸ್ಟೇಟ್ ನ ಒಳಭಾಗದಲ್ಲಿರುವ ಬೃಹತ್ ಗಾತ್ರದ ಮರ ಮನೆ ಮೇಲೆ ಬಿದ್ದು ಈ ಸಮಸ್ಯೆಯಾಗಿದೆ  ಹಲವು ಬಾರಿ ಕಲ್ಮನೆ ಎಸ್ಟೇಟ್ ನ ವರಿಗೆ ತಿಳಿಸಿದರು ಸಹ ನಿರ್ಲಕ್ಷತನ ವಹಿಸಿದ್ದಾರೆ ಎಂದು ಮನೆಯ ಮಾಲೀಕ ಸಂತೋಷ್ ತಿಳಿಸಿದರು, ವರದಿ,ಶಬ್ಬೀರ್ ಅಹ್ಮದ್ hh ಪುರ 
Image
 ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಆರ್ಭಟ  ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ,  ಚಾರ್ಮಾಡಿ, ಕೊಟ್ಟಿಗೆಹಾರ, ಬಾಳೂರು, ಬಣಕಲ್, ಮೂಡಿಗೆರೆಯಲ್ಲಿ ಭಾರಿ ಮಳೆ  ನಿರಂತರ ಮಳೆಯಿಂದಾಗಿ ಪ್ರವಾಸಿಗರು ಹಾಗೂ ವಾಹನ ಸವಾರರು ಪರದಾಟ  ವಾಹನ ಚಲಾಯಿಸಲು ಆಗದೆ ನಿಂತಲ್ಲೇ ನಿಂತಿರುವ ವಾಹನಗಳು  ಮಂಜು ಮಿಶ್ರಿತ ಮಳೆಯಿಂದಾಗಿ ರಸ್ತೆ ಕಾಣದೆ ಹೈರಾಣು  ನಿನ್ನೆಯಿಂದಲೂ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ  🖋 ಶಬ್ಬೀರ್ ಅಹ್ಮದ್ hh ಪುರ
Image
  ಚಿಕ್ಕಮಗಳೂರು:- ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಬೈರೇದೇವರು ಗ್ರಾಮ ಇದಾಗಿದ್ದು ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ಸರಿಸುಮಾರು 13 ಕಿಲೋಮಿಟರ್ ಬರುತ್ತಿದ್ದಂತೆ ಗಡಿಕಲ್ ಎಂಬ ಗ್ರಾಮವು ಸಿಗುತ್ತದೆ ಅಲ್ಲಿಂದ ಬಲಕ್ಕೆ ತಿರುಗಿದರೆ ಮೇಗೂರು ಮಾರ್ಗವಾಗಿ ಚಲಿಸಿದರೆ ಕೊಗ್ರೆ ಗ್ರಾಮಕ್ಕೆ 18 ಕಿಲೋಮೀಟರ್ ಪ್ರಯಾಣ ಅಷ್ಟೇ, ಅದೇ ರೀತಿಯಾಗಿ ಬೈರೇದೇವರು ಬೈಪಾಸ್ ಮೂಲಕ  ಚಲಿಸಿದರೆ ಸರಿಸುಮಾರು 10 ಕಿಲೋಮೀಟರ್ ದೂರದಷ್ಟು ಸಂಚಾರ ಉಳಿತಾಯವಾಗುತ್ತದೆ ಈ ಮಾರ್ಗದಲ್ಲಿ ಅತಿ ಹೆಚ್ಚಾಗಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರವಾಸಿಗರು ಕಳಸ ಹೊರನಾಡು ಕುದುರೆಮುಖ ಸೇರಿದಂತೆ ಶೃಂಗೇರಿ ಹೋಗುವ ಪ್ರಯಾಣಿಕರು ಅತಿ ಹೆಚ್ಚು, ಅದೇ ರೀತಿ ಈ ರಸ್ತೆಯು ಸರಿಯಿಲ್ಲದ ಕಾರಣ ವಾಹನ ಸವಾರರು ಹಾಗೂ ಗ್ರಾಮಸ್ಥರ ಗೋಳು ಕೇಳುವವರು ಯಾರು ಇಲ್ಲ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು,   ವರದಿ, ಶಬ್ಬೀರ್ ಅಹ್ಮದ್ hh ಪುರ 

ಕೊಪ್ಪ, ಎನ್ ಕೆ ರೋಡ್,ಜಯಪುರ ರಸ್ತೆ ಕುಸಿತ,!ಚಾಲಕರೆ ಎಚ್ಚರ,!

Image
  ಕೊಪ್ಪ, ಎನ್ ಕೆ ರೋಡ್,ಜಯಪುರ ರಸ್ತೆ ಕುಸಿತ,!ಚಾಲಕರೆ ಎಚ್ಚರ,! ಕೊಪ್ಪ:- ಪಟ್ಟಣದ ನಾಲ್ಕು ಕಿಲೋಮೀಟರ್ ದೂರ ಇರುವNK ರಸ್ತೆ ಮೊದಲು ಮನೆ ಎಂಬಲ್ಲಿ ನಿನ್ನೆ ರಾತ್ರಿ ಧಾರಾಕಾರ ಸುರಿದ ಮಳೆಯಿಂದ, ಕೊಪ್ಪದಿಂದ ಜಯಪುರ ಮಾರ್ಗವಾಗಿ ಚಿಕ್ಕಮಗಳೂರಿಗೆ ಹೋಗುವ ರಸ್ತೆ. ತೀರಾ ಕುಸಿದಿದ್ದು ವಾಹನ ಸವಾರರು ಆದಷ್ಟು ಜಾಗೃತೆಯಿಂದ ಚಲಾಯಿಸಬೇಕು, ಮತ್ತು ಯಾವುದೇ ರೀತಿಯ ತಡೆಗೋಡೆ ಇಲ್ಲದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ,, ವರದಿ,ಮಜೀದ್ ಸಣ್ಣಕೇರೆ

ಕಾಫಿನಾಡಲ್ಲಿ ಮಳೆ ಅಬ್ಬರ ಹಿನ್ನಲೆ ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ,

Image
  ಕಾಫಿನಾಡಲ್ಲಿ ಮಳೆ ಅಬ್ಬರ ಹಿನ್ನಲೆ ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ, ಚಿಕ್ಕಮಗಳೂರು:- ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಶಾಲೆಗಳಿಗೆ ರಜೆ, ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ,16/07/2024, ಒಂದು ರಜೆ ಘೋಷಿಸಿದ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಿಂದ ಆದೇಶ, ಕೊಪ್ಪದಲ್ಲಿ ಹಾಗೂ ಕೊಪ್ಪದ ಸುತ್ತಮುತ್ತ ಎರಡು ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಶಾಲೆ ಕಾಲೇಜುಗಳಿಗೆ ರಜೆ ಕೊಡದೆ ಮಕ್ಕಳೊಂದಿಗೆ ಚೆಲ್ಲಾಟ ಆಡುತ್ತಿರುವ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲ್ಲಿನ ಶಾಸಕರು ಶಿಕ್ಷಣಾಧಿಕಾರಿಗಳು. ಒಂದು ಕಡೆಯಿಂದ ಕಾಡಿನ ಮರಗಳು ದಾರಿ ಮದ್ಯ ಉರುಳುತ್ತಿವೆ ಮಲೆನಾಡು ಭಾಗ ಆಗಿರುವುದರಿಂದ ಒಂದು ಕಡೆ ಹಳ್ಳಕೊಳ್ಳಗಳು ತುಂಬುತ್ತಿದೆ. ಆದರೂ ಕಣ್ಮುಚ್ಚಿ ಕುಳಿತಿರುವುದು ಒಂದು ಬೇಸರದ ಸಂಗತಿ. ವರದಿ,ಮಜೀದ್ ಸಣ್ಣಕೇರೆ

ಕುವೈತ್,K C F, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ KCF ಕುವೈಟ್ ರಾಷ್ಟ್ರೀಯ ಸಮಿತಿ,ನಭಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ ಜನ್ಮ ದಿನಾಚರಣೆ,

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ KCF ಕುವೈಟ್ ರಾಷ್ಟ್ರೀಯ ಸಮಿತಿ,ನಭಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ ಜನ್ಮ ದಿನಾಚರಣೆ, ಈದ್ಮೀಲಾದುನ್ನಬಿ ಕಾರ್ಯಕ್ರಮ KCF ರಾಷ್ಟ್ರೀಯ ಸಮಿತಿಯ ವತಿಯಿಂದ 2024/ಸೆಪ್ಟೆಂಬರ್ 6 ರ ಶುಕ್ರವಾರದಂದು  ಅಬ್ಬಾಸಿಯ ಸಭಾಂಗಣದಲ್ಲಿ ನಡೆಯಲಿದೆ *(ಇನ್ಶಅಲ್ಲಾಹ)* ಕಾರ್ಯಕ್ರಮದ  ಸ್ವಾಗತ ಸಮಿತಿ ರಚನೆಯು ದಿನಾಂಕ12/07/2024 ರ ಶುಕ್ರವಾರ KCF *ಅಧ್ಯಕ್ಷರಾದ ಬಹು ಹುಸೈನ್ ಎರುಮಾಡ್ ಅವರ ಅಧ್ಯಕ್ಷತೆ ಯಲ್ಲಿ ಸ್ವಾಗತ ಸಮಿತಿ  ಫರ್ವಾನಿಯ ಕೆಸಿಎಫ್ ಕಚೇರಿ ಯಲ್ಲಿ ರಚನೆಗೊಂಡಿದೆ  ಈದ್ ಮೀಲಾದ್ ಕಾರ್ಯಕ್ರಮದ *ಛೇರ್ಮನ್ ಆಗಿ ಬಹು:- ಅಬ್ದುಲ್ ರಹ್ಮಾನ್ ಸಖಾಫಿ, ವೈಸ್ ಛೇರ್ಮನ್ ಬಹು:- ಉಮರ್ ಝುಹ್ರಿ   ಕನ್ವಿನರ್ ಆಗಿ ಜನಾಬ್:- ಯಾಕೂಬ್ ಕಾರ್ಕಳ, ಫೈನಾನ್ಸ್ ಜನಾಬ್:- ಇಕ್ಬಾಲ್ ಕಂದಾವರ ಇವರನ್ನು ಸರ್ವನುಮತದಿಂದ  ಅಂಗಿಕರಿಸಲಾಯಿತು,    ಈದ್ ಮೀಲಾದ್ ಪ್ರಚಾರ  ವಿಭಾಗಕ್ಕೆ ನಾಯಕರಾಗಿ ಬಹು:- ಶಾವುಲ್ ಹಮೀದ್ ಸಹದಿ ಉಸ್ತಾದ್ ಹಾಗೂ ಜನಾಬ್:- ಇಬ್ರಾಹಿಂ ವೇಣೂರು.      ಬಹು:- ಶಫೀಕ್ ಅಹ್ಸನಿ      ಬಹು:- ಕಾಸಿಂ ಉಸ್ತಾದ್       ಜ. ಇಕ್ಬಾಲ್ ಎಡಪದವು      ಜ.ರಹೀಮ್ ಕೃಷ್ಣಾಪುರ       ಜ. ಇಬ್ರಾಹಿಂ ಅಡ್ಕರ್     ...

ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,

Image
  ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,   ಕೊಪ್ಪ ತಾಲ್ಲೂಕಿನ ಹರಿಹರಪುರ  ಸಿಗದಾಳಿನ ಕಿರು ಸೇತುವೆಯ ತಿರುವಿನಲ್ಲಿ ಇಂದು ಈ ಘಟನೆ ನಡೆದಿದೆ.  ಎಟಿಯೋಸ್ ಕಾರು ಶೃಂಗೇರಿ ಕಡೆಯಿಂದ ಬರುತ್ತಿದ್ದ  ವೇಳೆಯಲ್ಲಿ ಸಿಗದಾಳು ತಿರುವಿನಲ್ಲಿ ಮುಂದಿನಿಂದ ಬರುತ್ತಿದ್ದ "ಬ್ರೀಝ" ಕಾರಿಗೆ  ಬಲವಾಗಿ ಗುದ್ದಿದ ರಬಸಕ್ಕೆ ಬ್ರೀಝ ಕಾರು ಸುಮಾರು 100ಅಡಿ ದೂರಕ್ಕೆ ಬಂದು ರಸ್ತೆ ಬದಿ ಕಟ್ಟಲಾಗಿರುವ ತಡೆಗೋಡೆಗೆ ತಡೆದು ತಿರುಗಿ ನಿಂತಿದೆ, ಎರಡು ಕಾರು ಜಖಂ ಆಗಿದ್ದು, ಕಾರು ಮಾಲೀಕ ನಾಗರಾಜ್ ಬಳ್ಳಾರಿ ವಿಜಯಪುರ ಎಂದು ಹೇಳಲಾಗಿದ್ದು, ಬ್ರೀಝ ಕಾರಿನಲ್ಲಿ ಒಬ್ಬರು ಮಾತ್ರ ಇದ್ದು ಸ್ಥಳೀಯ ಪಾಂಡೇಶ್ ನಿಲುವಾಗಿಲು ಸಮೀಪ ತಲಕಾನೆ ಯವರು ಎಂದು ತಿಳಿಯಲಾಗಿದೆ.ಎರಡೂ ಕಡೆಯವರಿಗೂ ಯಾವುದೇ ಜೀವ ಹಾನಿ ಯಾಗಿಲ್ಲ. 🖋 ಶಬ್ಬೀರ್ ಅಹ್ಮದ್ hh ಪುರ

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?

Image
  ಕೊಪ್ಪ (ತಾ) ಚಿಟ್ಟೆಮಕ್ಕಿ SVS ಸಂಸ್ಥೆಯ ಮಹೇಶ್ಶೆಟ್ಟಿ ಅವರ ಮಗಳು "ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ "ಆತ್ಮಹತ್ಯೆ ಸುತ್ತಅನುಮಾನ ಗಳ ಹುತ್ತ "  ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳನಡೆದಿದೆಎಂದುಆರೋಪಗಳು ಕೇಳಿಬರುತ್ತಿದೆ.ಈಕುರಿತಾಗಿ ಕೆಲವು ಪೊಸ್ಟರ್ಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿವೆ ಈ ಆತ್ಮಹತ್ಯೆಯ ಹಿಂದೆ ಕಾಲೇಜಿನ ಸಿ ಎ ವಿಭಾಗದಲ್ಲಿ "ಅನಂತಶಯನ "ಎಂಬುವವರು ಕಾರಣ ಎಂದು ಆರೋಪಿಸಲಾಗಿದೆ.ಈಕುರಿತು ಹೆಚ್ಚಿನ ತನಿಖೆಗೆ ವಿದ್ಯಾರ್ಥಿ ಸಂಘಟನೆಗಳು ಅಗ್ರಹಿಸುತ್ತಿವೆ. ಈ ಯುವತಿಯು ಮಂಗಳೂರಿನ "ಆಳ್ವಾಸ್ ಕಾಲೇಜಿನಲ್ಲಿ 'ವ್ಯಾಸಂಗ ಮಾಡುತ್ತಿದ್ದಳು. ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಭಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು,   🖋 ಶಬ್ಬೀರ್ ಅಹ್ಮದ್ hh ಪುರ 

ಕೊಪ್ಪ :-ಹರಿಹರಪುರ ಗ್ರಾಮಸಭೆಯಲ್ಲಿ "ಅಲ್ಲೋಲ ಕಲ್ಲೋಲ,

Image
  ಕೊಪ್ಪ :-ಹರಿಹರಪುರ ಗ್ರಾಮಸಭೆಯಲ್ಲಿ "ಅಲ್ಲೋಲ ಕಲ್ಲೋಲ,  ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ಗ್ರಾಮ ಪಂಚಾಯಿತಿಯಲ್ಲಿ ಜುಲೈ 11 /2024/ ನೇ ಸಾಲಿನ ಗ್ರಾಮ ಸಭೆ ನಡೆಯಿತು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಅದೇ ರೀತಿ ಹರಿಹರಪುರ  ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು ಅದೇ ರೀತಿ ಸವಿತಾ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಾಗಿದ್ದ ಗ್ರಾಮ ಸಭೆಯಲ್ಲಿ ಗ್ರಾಮದ ಅಧ್ಯಕ್ಷರು ಸೇರಿದಂತೆ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಸರ್ವ ಸದಸ್ಯರು ಕೂಡ ಸಮಯಕ್ಕೆ ಸರಿಯಾಗಿ ಬಾರದೆ ನಿರ್ಲಕ್ಷತನ ವಹಿಸಿದ್ದಾರೆ ಎಂದು ಗ್ರಾಮದ ಗ್ರಾಮಸ್ಥರು ಆರೋಪ ಅದೇ ರೀತಿ 11:35ರ ಸುಮಾರಿಗೆ ಸಭೆಯನ್ನು ಅಲಂಕರಿಸಿದ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು ಅದೇ ಸಂದರ್ಭದಲ್ಲಿ ಹರಿಹರಪುರ ಗ್ರಾಮ ಪಂಚಾಯಿತಿ ಯ ಕೆಲವು ಸದಸ್ಯರು ಸಭೆ ಮುಗಿಯುವ ಮುನ್ನವೇ ಹೊರಹೋಗಿದ್ದಾರೆ ಅದೇ ರೀತಿ ಗ್ರಾಮದ ಸಮಸ್ಯೆಗಳನ್ನು ಆಲಿಸದೆ ಕೆಲವು ಸದಸ್ಯರು ನಿರ್ಲಕ್ಷತನ ತೋರಿದ್ದಾರೆ ಅದೇ ರೀತಿ ಗ್ರಾಮ ಸಭೆಗೆ ಕೆಲವೊಂದು ಇಲಾಖೆಯ ಅಧಿಕಾರಿಗಳು ಗೈರು ಹಾಜರಿ ಆರೋಗ್ಯ ಇಲಾಖೆ ವೈದ್ಯರು ಪೊಲೀಸ್ ಇಲಾಖೆ ಹಾಗೂ ಮೆಸ್ಕಾಂ ಲೋಕೋಪಯೋಗಿ ಇಲಾಖೆ ಇತ್ಯಾದಿ ವಿಷಯಗಳ ಕುರಿತು ಕರ್ತವ್ಯ ಲೋಪ ದೋಷ ವಿರುದ್ಧ ಸ್ಥಳೀಯರು ಗ್ರಾಮಸ್ಥರು ಕೆಂಡಮಂಡಲವಾಗಿ ಆಕ್ರೋಶವನ್ನು ...
Image
  ಕೊಪ್ಪ:-ಸಂತ_ಜೋಸೆಫರ_ಪ್ರಾಥಮಿಕ_ಹಾಗೂ_ಪ್ರೌಢಶಾಲೆ ಕೊಪ್ಪ.ಇದರ ನವೀಕೃತ ಶಾಲಾ ಸಭಾಂಗಣ "ಅನುಗ್ರಹ" ಉದ್ಘಾಟನಾ ಸಮಾರಂಭದಲ್ಲಿ  ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಟಿ.ಡಿ.ರಾಜೇಗೌಡರು ಭಾಗವಹಿಸಿದರು,ವಂದನೀಯ ಫಾದರ್ ಮೆಲ್ವಿನ್ ಟೆಲ್ಲಿಸ್, ವಂದನೀಯ ಭಗಿನಿ ಲಿಲ್ಲಿ ಫರ್ನಾಂಡಿಸ್ ಅವರೊಂದಿಗೆ  ಉದ್ಘಾಟನೆಯನ್ನು ನೆರವೇರಿಸಿದರು. ಅನುಗ್ರಹ ನವೀಕೃತ ಶಾಲಾ ಸಂಭಾಗಣಕ್ಕೆ ಮಾನ್ಯ ಶಾಸಕರ ಪ್ರದೇಶಾಭಿವೃದ್ಧಿಯಿಂದ ₹10 ಲಕ್ಷ ಅನುದಾನವನ್ನು ನೀಡಿರುತ್ತಾರೆ ಎಂದು ಶಾಲಾ ಅಭಿವೃದ್ಧಿಮಂಡಳಿಯವರು ತಿಳಿಸಿದರು, 🖋 ವೀರಮಣಿ

ಜಯಪುರ :- ಪೆರೇಂಟ್ಸ್ ಮೀಟಿಂಗ್‌ ಗೆ ಬಂದ ಮಹಿಳೆ ಆತ್ಮಹತ್ಯೆ,?

Image
 ಕೊಪ್ಪ :- ಪೆರೇಂಟ್ಸ್ ಮೀಟಿಂಗ್‌ ಗೆ ಬಂದ ಮಹಿಳೆ ಆತ್ಮಹತ್ಯೆ,?     ಕೊಪ್ಪ ತಾಲ್ಲೂಕಿನ ಜಯಪುರ ಸಮೀಪ ಕಟ್ಟೆಮನೆ ಯಲ್ಲಿ ಇರುವ "ಸತ್ಯಸಾಯಿ ಶ್ರೀನಿಕೇತನ ಮಳಿಗೆ "ವಾಸತಿಶಾಲೆ ಯಲ್ಲಿ ಇಂದು ಮುಂಜಾನೆ ಬೆಂಗಳೂರು ಚಿಕ್ಕಬಳ್ಳಾಪುರ ಮೂಲದ ಚೈತ್ರ ಗಜೇಂದ್ರ(33),ಆತ್ಮಹತ್ಯೆ ಮಾಡಿ ಕೊಂಡ ಮಹಿಳೆ,  ಪೆರೇಂಟ್ಸ್ ಮೀಟಿಂಗ್ ಗೆಂದು ಬಂದವರು ಇಂದು ಮುಂಜಾನೆ ಬೆಳ್ಳಮ್ ಬೆಳಗ್ಗೆ ಸುಮಾರು ನಾಲ್ಕು ಗಂಟೆಗೆ ಶಾಲೆಯ 3ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ,ಮಹಿಳೆ ಚಿಕ್ಕಬಳ್ಳಾಪುರ ಮೂಲದವರಾಗಿದ್ದು ಇವರು ಹೂವಿನ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಕೊಪ್ಪ ಮಂಜುನಾಥ್ ಸಿ ಪಿ ಐ, ಹಾಗೂ ಜಯಪುರ ಪೊಲೀಸ್ ಠಾಣಾಧಿಕಾರಿ ಅಂಬರೀಷ್ ಪಿ ಎಸ್ ಐ, ನೇತೃತ್ವದಲ್ಲಿ ತಿಳಿದು ಬಂದಿದ್ದು ಶವ ವನ್ನು ಕೊಪ್ಪ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಇನ್ನೂ ಹೆಚ್ಚಿನ ವಿಷಯ ಪೊಲೀಸರು ತನಿಖೆ ಯಿಂದ ತಿಳಿಯ ಬೇಕಾಗಿದೆ. ಒಬ್ಬಳೇ ಮಗಳು ಅರ್ಪಿತಾ 8ನೇ ತರಗತಿಯಲ್ಲಿ ಓದುತಿದ್ದು ಪೆರಂಟ್ಸ್ ಮೀಟಿಂಗ್ ಇವರನ್ನು ಕರೆಯಲಾಗಿತ್ತು ಎನ್ನಲಾಗಿದೆ, 🖋 ಶಬ್ಬೀರ್ ಅಹ್ಮದ್ hh ಪುರ 

ಮಂಗಳೂರು, ಕೂರ ತಂಙಳ್ ನಿಧನರಾಗಿದ್ದಾರೆ.

Image
  ಮಂಗಳೂರು, ಜು.8: ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಶೃಂಗೇರಿ,ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಪೋಲೀಸರ ವಶಕ್ಕೆ.

Image
 ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಪೋಲೀಸರ ವಶಕ್ಕೆ.   ಶೃಂಗೇರಿ :ಜುಲೈ 7 ಪಟ್ಟಣದ ಗಾಂದಿಮೈದಾನದ ಹೋಟೆಲ್ ವೊಂದರಲ್ಲಿ ಮಾರುತಿ ಇವರು ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದರು. ಆರೋಪಿಯು ಅಕ್ರಮವಾಗಿ ಹೊಂದಿದ್ದ ಅಂದಾಜು 1000 ರೂ 2. 250ಲೀಟರ್ ಮದ್ಯವನ್ನು ಮತ್ತು ಆರೋಪಿ ಮದ್ಯ ಮರಾಠದಿಂದ ಸಂಗ್ರಹಿಸಿದ 100ರೂ ನಗದನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಆರೋಪಿ ವಿರುದ್ದ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊoಡಿದ್ದಾರೆ. 🖋 ಶಬ್ಬೀರ್ ಅಹ್ಮದ್ hh ಪುರ 

ಭೀಕರ ರಸ್ತೆ ಅಪಘಾತ,

Image
 ಶಿವಮೊಗ್ಗ :ಜುಲೈ 6,ಜಿಲ್ಲೆಯ ಶಿವಮೊಗ್ಗ -ಸಾಗರ ರಸ್ತೆಯ ಮುದ್ದಿನ ಕೊಪ್ಪ ಗ್ರಾಮದ ಬಳಿ ಇಂದು ಮಧ್ಯಾಹ್ನ ಶಿವಮೊಗ್ಗ ದಿಂದ ಸಾಗರ ಕಡೆಗೆ ಚಲಿಸುತ್ತಿದ್ದ ಇನೋವಾ ಕಾರು ಹಾಗೂ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಶಿಫ್ಟ್ ಡೀಸೈರ್ ಕಾರುಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದ್ದು, ಪರಿಣಾಮವಾಗಿ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರೆಎಂದು ತಿಳಿದು ಬಂದಿದೆ,                ಕಾರಿನಲ್ಲಿದ್ದ ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ  ಗಾಯಾಳುಗಳ ವಿವರ ಇನ್ನಷ್ಟು ತಿಳಿಯಬೇಕಾಗಿದೆ. 🖋 ಶಬ್ಬೀರ್ ಅಹ್ಮದ್hh ಪುರ

ಎನ್, ಆರ್, ಪುರ:-ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ನಿವೃತ್ತ ಶಿಕ್ಷಕನ ಬಂಧನ.

Image
  ಎನ್, ಆರ್, ಪುರ:-ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ನಿವೃತ್ತ ಶಿಕ್ಷಕನ ಬಂಧನ. ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಿವೃತ್ತ ಶಿಕ್ಷಕನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ನಡೆದಿದೆ.  ವಸತಿ ಶಾಲೆಯೊಂದರ 8 ನೇ ತರಗತಿ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎನ್.ಆರ್.ಪುರ ಪೊಲೀಸರು ಬಂಧಿಸಿ ಚಿಕ್ಕಮಗಳೂರು ಪೋಕ್ಸೋ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಧೀಶರು ಜು.18 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಬಂಧಿತ ನಿವೃತ್ತ ಶಿಕ್ಷಕ ರಾಮಕೃಷ್ಣ ಎಂದು ತಿಳಿದು ಬಂದಿದೆ. ವರದಿ:- ಮಜೀದ್ ಕೊಪ್ಪ 

ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ,

Image
  ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ ,   ವಾರ್ತಾ ಸಾರಥಿ:-   ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಘೋಷಣೆಯನ್ವಯ 100 ಹಾಸಿಗೆಗಳ ಸಾಮಾರ್ಥ್ಯದ ಆಸ್ಪತ್ರೆ ಶೃಂಗೇರಿ ಸೇರಿದಂತೆ 7 ತಾಲ್ಲೂಕುಗಳಿಗೆ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ರೂ.256.15 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮತಿ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಲಾಗಿದೆ,ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ತಿಳಿಸಿದ್ದಾರೆ. ಶೃಂಗೇರಿ :"ರಸ್ತೆ ಬಂದ್ "  ತಾಲ್ಲೂಕಿನಾದ್ಯಂತ ಬಿರುಸಿನ ಮಳೆ ಸುರಿದು ಹಲವೆಡೆ ಮರಗಳು ಬಿದ್ದಿದ್ದು ತಾಲ್ಲೂಕಿನ ತ್ಯಾವನ ಬಳಿ ಧರೆ ಹಾಗೂ ಮರ ರಸ್ತೆ (ಮಂಗಳೂರು ಸೋಲಾಪುರ್ ರಾಷ್ಟೀಯ ಹೆದ್ದಾರಿ169)ಮೇಲೆ ಕುಸಿದು ಬಿದ್ದಿದೆ ಇದರಿಂದ ಸ್ವಲ್ಪ ಸಮಯ ಜನಜೀವನ ,ವಾಹನಸಂಚಾರಹಾಗೂ ವಿದ್ಯುತ್ ಸಂಚಾರ ಕೂಡ ಸ್ಥಗಿತ ವಾಗಿತ್ತು . 🖋  ಶಬ್ಬೀರ್ ಅಹ್ಮದ್ hh ಪುರ 

ಶೃಂಗೇರಿ:-ತುಂಗಾ ನದಿಯ ನೀರಿನ ಮಟ್ಟ ಹೆಚ್ಚಳದಿಂದ ಮುಳುಗಿರುವ ಕಪ್ಪೇ ಶಂಕರ ದೇವಸ್ಥಾನ.

Image
 ಶೃಂಗೇರಿ:-ತುಂಗಾ ನದಿಯ ನೀರಿನ ಮಟ್ಟ ಹೆಚ್ಚಳದಿಂದ ಕಪ್ಪೇ ಶಂಕರ ದೇವಸ್ಥಾನ ಮುಳುಗಿದೆ.     ಶೃಂಗೇರಿ ಕ್ಷೇತ್ರ ದಾದ್ಯಂತ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಕಳಸ, ಮೂಡಿಗೆರೆ ಹಲವು ಸುತ್ತಮುತ್ತಲಿನ ತಾಲ್ಲೂಕು ಸೇರಿದಂತೆ ಒಂದು ವಾರದಿಂದ ಮಳೆ ಯು ನಿರಂತರವಾಗಿ ಸುರಿಯುತ್ತಿದ್ದು ತುಂಗಾ ನದಿಯ ನೀರಿನಪ್ರಮಾಣದಿಂದ ಕಪ್ಪೇ ಶಂಕರನ ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ. ಕೊಪ್ಪ:- ತಾಲ್ಲೂಕಿನ ಹರಿಹರಪುರ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಮಿಟ್ಟಿಗೆ ಗೆ "ಅಮ್ಮ ಫೌಂಡೇಶನ್ "ಅಧ್ಯಕ್ಷ ಸುಧಾಕರ್ ಶೆಟ್ಟಿ ಅವರು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ವಾಸ್ತವದಲ್ಲಿ ನಾವು ಸರ್ಕಾರಿ ಶಾಲೆಗಳ ಸ್ಥಿತಿಗತಿ ಗಳನ್ನು  ಗಮನಿಸಿದರೆ ನಿಜಕ್ಕೂ ಪರಿಸ್ಥಿತಿ ಅಯೋಮಯ ವಾಗಿದೆ ಎಂದು ತಿಳಿಸಿದ್ದಾರೆ. 🖋 ಶಬ್ಬೀರ್ ಅಹ್ಮಮದ hh ಪುರ 
Image
  ಶಿವಮೊಗ್ಗ:-ಜಾವಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಸಾವು. ಜುಲೈ 3 ಬುಧವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಶಿವಮೊಗ್ಗ ಶಿಕಾರಿಪುರ ರಸ್ತೆ ಮದ್ಯೆ ಖಾಸಗಿ ಬಸ್ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಡಿಕ್ಕಿಯಾದ ರಬಸಕ್ಕೆ ಬಸ್ಸಿನಲ್ಲಿದ್ದ 15ದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 🖋 ಶಬ್ಬೀರ್ ಅಹ್ಮದ್ hh ಪುರ

ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಅನಿರ್ದಿಷ್ಟವಾಧಿ ಮುಷ್ಕರ,

Image
 ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಅನಿರ್ದಿಷ್ಟವಾಧಿ ಮುಷ್ಕರ, ಶೃಂಗೇರಿ:-ದಿನಾಂಕ :ಜುಲೈ 01,ಸೋಮವಾರದಿಂದ ಪ್ರಾರಂಭಗೊಂಡ ಮುಷ್ಕರವು ಸೇವಾಖಾಯಮಾತಿ,ನೇರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೃಂಗೇರಿ ಪಟ್ಟಣ ಪಂಚಾಯಿತಿ ಮುಂಭಾಗ ಇಲ್ಲಿನ ಹೊರ ಗುತ್ತಿಗೆ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ಧಾಷ್ಟವಾಧಿ ಮುಷ್ಕರ ಇಂದಿಗೆ ಅಂದರೆ ಗುರುವಾರಕ್ಕೆ 4ನೇ ದಿನಕ್ಕೆ ಕಾಲಿಟ್ಟಿದೆ ಪ್ರತಿ ದಿನ ಪಟ್ಟಣದ ವಾರ್ಡ್ ಮನೆಗಳಿಂದ ಕಸ ಸಂಗ್ರಹಣೆ ಮಾಡಿತ್ತಿದ್ದ ಪೌರ ಕಾರ್ಮಿಕರು ಮುಷ್ಕರ ಕೈಗೊಂಡಿದ್ದರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸ, ತ್ಯಾಜ್ಯಗಳು ಕಂಡುಬರುತ್ತಿದ್ದು ಮನೆಗಳ ಕಸ ವಿಲೇವಾರಿಯಾಗದೆ ಜನರಿಗೆ ತೊಂದರೆಉಂಟಾಗುತ್ತಿದೆ ಮನಗೊಂಡ ಜೆ ಡಿ ಎಸ್ ಮುಖಂಡ ಸುಧಾಕರ್ ಶೆಟ್ಟಿ ಮುಷ್ಕರಕ್ಕೆ ಬಂದು ಕುಳಿತು ಸಂಪೂರ್ಣ ಬೆಂಬಲ ಸೂಚಿಸುವ ಭರವಸೆ ನೀಡಿದರು. 🖋 ಶಬ್ಬೀರ್ ಅಹ್ಮಮದ್ hh ಪುರ 

ರಿಯಾದ್:- ಮರಣದಂಡನೆ ಶಿಕ್ಷೆಗೆ ಗುರಿಯಾಗಿ ರಿಯಾದ್ ಜೈಲಿನಲ್ಲಿರುವ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್ ಬಿಡುಗಡೆ ಭಾಗ್ಯ.

Image
  ರಿಯಾದ್:- ಮರಣದಂಡನೆ ಶಿಕ್ಷೆಗೆ ಗುರಿಯಾಗಿ ರಿಯಾದ್ ಜೈಲಿನಲ್ಲಿರುವ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್ ಬಿಡುಗಡೆ ಭಾಗ್ಯ ಕಂಡಿದೆ. ಪರಿಹಾರದ ಹಣ ಸ್ವೀಕರಿಸುವ ಮೂಲಕ ರಹೀಮ್‌ನನ್ನು ಬಿಡುಗಡೆ ಮಾಡಬಹುದು ಎಂದು ಹತ್ಯೆಯಾದ ಸೌದಿ ಯುವಕನ ಕುಟುಂಬವು ರಿಯಾದ್ ಕ್ರಿಮಿನಲ್ ಕೋರ್ಟ್‌ಗೆ ತಿಳಿಸಿದೆ. ಇಂದು ಕುಟುಂಬಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯವು ರಹೀಮ್‌ನ ಮರಣದಂಡನೆಯನ್ನು ರದ್ದುಗೊಳಿಸಿತು. ಇದು ರಹೀಮ್‌ನ ಬಿಡುಗಡೆಗೆ ಅಗತ್ಯವಾದ ಎಲ್ಲಾ ಸಂಕೀರ್ಣ ಮತ್ತು ನಿರ್ಣಾಯಕ ಅಡಚಣೆಗಳನ್ನು ಕೊನೆಗೊಳಿಸಿತು. ಹತ್ಯೆಗೀಡಾದ ಸೌದಿ ಯುವಕನ ಕುಟುಂಬದವರು ಬೇಡಿಕೆಯಿಟ್ಟಿದ್ದ 15 ಮಿಲಿಯನ್ ರಿಯಾಲ್ (ಸುಮಾರು 35 ಕೋಟಿ ರೂ.) ಚೆಕ್ ಅನ್ನು ಈಗಾಗಲೇ ಭಾರತೀಯ ರಾಯಭಾರಿ ಕಚೇರಿ ಮೂಲಕ ನ್ಯಾಯಾಲಯಕ್ಕೆ ತಲುಪಿಸಲಾಗಿತ್ತು.ಪರಿಹಾರದ ಹಣ ಸ್ವೀಕರಿಸುವ ಮೂಲಕ ರಹೀಮ್‌ನನ್ನು ಕ್ಷಮಿಸಲು ಸಿದ್ಧ ಎಂದು ತಿಳಿಸಿದ ಕುಟುಂಬದ ಒಪ್ಪಿಗೆ ಪತ್ರವನ್ನು ನ್ಯಾಯಾಲಯವು ರಿಯಾದ್ ಗವರ್ನರೇಟ್‌ಗೆ ಹಸ್ತಾಂತರಿಸಲಿದೆ. ರಹೀಮ್‌ನನ್ನು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ,

ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ:ಮೂರು ದೇಶಿ ಕಾನೂನು ಜಾರಿ,

Image
  ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ:ಮೂರು ದೇಶಿ ಕಾನೂನು ಜಾರಿ, ನವದೆಹಲಿ:-ದೇಶದಲ್ಲಿ ಇಂದಿನಿಂದ ಕಾನೂನು ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ (Code of Criminal Procedure), ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ (Indian Evidence Act) ಗುಡ್‌ಬೈ ಹೇಳಲಾಗುತ್ತದೆ. ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುತ್ತಿದೆ. ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಹಿಂದೆ ಎಷ್ಟಿತ್ತು? ಈಗ ಎಷ್ಟು ಸೆಕ್ಷನ್‌ಗಳು ಇದೆ? ಭಾರತೀಯ ದಂಡ ಸಂಹಿತೆ (IPC) 511 ಸೆಕ್ಷನ್‌ ಇದ್ದರೆ ಭಾರತೀಯ ನ್ಯಾಯ ಸಂಹಿತಾ(BNS)-358 ಸೆಕ್ಷನ್‌ಗಳು ಇದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 484 ಸೆಕ್ಷನ್‌ಗಳು ಇದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) – 531 ಸೆಕ್ಷನ್‌ಗಳು ಇದೆ. ಭಾರತೀಯ ಸಾಕ್ಷ್ಯ ಕಾಯ್ದೆ (IEA) 167 ಸೆಕ್ಷನ್‌ಗಳು ಇದ್ದರೆ ಭಾರತೀಯ ಸಾಕ್ಷ್ಯ ಅಧಿನಿಯಮ (BSA) 170 ಸೆ...

ಭೀಕರ ರಸ್ತೆ ಅಪಘಾತ:- ಏಳು ಜನರ ದುರ್ಮರಣ

Image
  ಭೀಕರ ರಸ್ತೆ ಅಪಘಾತ:- ಏಳು ಜನರ ದುರ್ಮರಣ,   ಮಹಾರಾಷ್ಟ: ರಾಜ್ಯದ ಮುಂಬೈ ನಾಗಪುರ ಎಕ್ಸ್ ಪ್ರೆಸ್ಸ್ ಹೈವೆಯಲ್ಲಿ ಮಧ್ಯ ರಾತ್ರಿ ಭೀಕರ ದುರಂತ ಸಂಭವಿಸಿದೆ ಎರೆಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಾಗಿ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭಂವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಈ ಅಪಘಾತದಲ್ಲಿ ಒಟ್ಟು ಏಳುಮಂದಿ ಸಾವನ್ನಪ್ಪಿದ್ದುನಾಲ್ವರು ಗಂಭೀರಗಾಯಗೊಂಡಿದ್ದು ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಲಾಗಿದೆ. 🖋 ಶಬ್ಬೀರ್ ಅಹ್ಮದ್ hh ಪುರ

ತನಗೆ ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಫೋನ್ ಠಾಣೆಗೆ ತಂದು ಕೊಟ್ಟು ಮಾನವೀಯತೆ ಮೆರೆದ ಯುವಕ,

Image
  ದಿನಾಂಕ:-01/07/2024 ರಂದು ಕೊಪ್ಪ ತಾಲೂಕು ರಾಘವೇಂದ್ರ ನಗರದ ವಾಸಿಯಾದ ಶ್ರೀ ಅಶೋಕ್ ಕುಮಾರ್ ರವರು ತಮಗೆ ಕಲ್ಕೆರೆ ಸಮೀಪ ರಸ್ತೆಯಲ್ಲಿ ಸಿಕ್ಕಿದ ವಿವೊ ಮೊಬೈಲ್ ಫೋನನ್ನು ಕೊಪ್ಪ ಪೊಲೀಸ್ ಠಾಣೆಗೆ ತಂದು ನೀಡಿದ್ದು ಕೊಪ್ಪ ಪೋಲಿಸ್ ಠಾಣೆ ಪಿಎಸ್ಐ ಸರ್ ಬಸವರಾಜ್ ಜಿ ಕೆ ರವರು ಹಾಗೂ ಸಿಬ್ಬಂದಿಗಳು ಸದರಿ ಮೊಬೈಲ್ ನ ವಾರಸುದಾರರನ್ನು ಪತ್ತೆ ಮಾಡಿ ಸದರಿ ಮೊಬೈಲ್ ನ ವಾರಸುದಾರರಾದ ಶ್ರೀಮತಿ ತೆರೇಸಾ ಗಾಮ ಎಂಬುವರಿಗೆ ನೀಡಿದ್ದು ಶ್ರೀಮತಿ ತೆರೇಸಾ ಗಾಮ ರವರು ಪಿಎಸ್ಐ ಬಸವರಾಜ್ ಸರ್ ಹಾಗೂ ಸಿಬ್ಬಂದಿಯವರಿಗೆ  ಧನ್ಯವಾದ ತಿಳಿಸಿರುತ್ತಾರೆ, 🖋 ವೀರಮಣಿ ಬಾಳೆಹೊನ್ನುರು,
Image
 ಶೃಂಗೇರಿ:- ಜುಲೈ 5 ರಂದು ಪಟ್ಟಣದ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದ್ದು, ಜುಲೈ 5ರಂದು ಬೆಳಿಗ್ಗೆ 11:00 ಪ್ರಗತಿ ಪರಿಶೀಲನಾ ಸಭೆಗೆ TD ರಾಜೇಗೌಡ ರ ಅಧ್ಯಕ್ಷತೆ ಯೊಂದಿಗೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದು ಆಯಾ ಇಲಾಖೆ ಗಳ ಅಬಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ,, 🖋 ಶಬ್ಬೀರ್ ಅಹ್ಮದ್ hh ಪುರ